Saturday, August 25, 2012

"ಡೆಂಗು"ವಿನ ಡಂಗೂರ

 "೨೦ ಜನರನ್ನ ನನಗೆ ಕೊಡಿ, ನಾನೇ ಕಸ ವಿಲೇವಾರಿ ಮಾಡುತ್ತೇನೆ " ಆಧುನಿಕ ಸುಭಾಷ್ ಚಂದ್ರ ಬೋಸ್ ರ ರೀತಿಯಲ್ಲಿ ಗುಡುಗಿರೋದು ನಮ್ಮ ಘನತೆವೆತ್ತ ರಾಜ್ಯಪಾಲರು. 
"ಈಶಾನ್ಯ ರಾಜ್ಯಗಳ ಜನರನ್ನ ಮರಳಿ ಬೆಂಗಳೂರಿಗೆ ಬರುವಂತೆ ಕರೆ ಕೊಡಲು ಅಸ್ಸಾಂಗೆ ತೆರಳುವೆ" ಎಂದು ತುದಿಗಾಲಲ್ಲಿ ನಿಂತಿರುವ ಮಾನ್ಯ ಗೃಹ/ಉಪಮುಖ್ಯಮಂತ್ರಿಗಳು.
"ಲಕ್ಷ ರೂಪಾಯಿ/ ಘಂಟೆಗೆ ಸಾವಿರ ರೂಪಾಯಿ ಕೊಟ್ಟರೂ ಸರ್ಕಾರಿ ಕೆಲಸಕ್ಕೆ ವೈದ್ಯರು ಬರುತ್ತಿಲ್ಲ" ಅಂತ ವಿವೇಚನೆ ಇಲ್ಲದೆ (ಲಕ್ಷ ರೂಪಾಯಿ ಇರಲಿ ಸ್ವಾಮಿ ೫೦-೫೫ ವರ್ಷ ವಯಸ್ಸಿನ,ಈಗಲೂ ರಾತ್ರಿ ಪಾಳ್ಯದಲ್ಲಿ ಕರ್ತವ್ಯ ಮಾಡುವ ಹಿರಿಯ ವೈದ್ಯರ ಮೂಲ ವೇತನ ಈಗಲೂ ಕೂಡ ೪೦,೦೦೦ ಮುಟ್ಟಿಲ್ಲ ಅನ್ನೋದು ತಿಳಿದಿದೆಯೋ ಇಲ್ಲವೋ ) ಹೇಳಿಕೆ ಕೊಡೊ ಮಾನ್ಯ ಆರೋಗ್ಯ ಸಚಿವರು.
                   ಇಂತಿಪ್ಪ ಘನತೆವೆತ್ತವರ ಮಧ್ಯ ನರಳುತ್ತ ಇರೋದು ಮಾತ್ರ ಶ್ರೀಸಾಮಾನ್ಯ. ಆದರೆ ದಪ್ಪ ಚರ್ಮದ ಶ್ರೀಸಾಮಾನ್ಯನಿಗೆ  ಪರಿಸ್ಥಿತಿ ಕುತ್ತಿಗೆವರೆಗೂ ಬರೋವರೆಗೋ ಇದ್ಯಾವುದರ ಆಳ-ಹಗಲಗಳ ಅರಿವು ಇರೋದೇ ಇಲ್ಲ. ಪ್ರತಿ ದಿನ ಬೆಳಗ್ಗೆ ಎದ್ದು ಕೆಲಸಗಳಿಗೆ ಓಡಿ ಹೋಗಿ ಸಂಜೆ ಬಂದು ಹೊದ್ದು ಮಲಗುವ ಮಧ್ಯ ಸುತ್ತಮುತ್ತ  ಏನಾಗಿದೆ ಅನ್ನೋ ಗೊಡವೆಗೆ ಹೋಗದೆ ಇದ್ದರೆ ಅದೇ ತಾನು ಮಾಡೋ ಜೀವನೋತ್ಪನ್ನ ಕಾರ್ಯ ಅನ್ನೋ ಸಂತೃಪ್ತ ಭಾವ. ಆದರೆ ಸಮಯ ಕೈ ಮೀರಿ ಹೊಗೊಮುಂಚೆ ಕನಿಷ್ಠ ಪಕ್ಷ ನಮ್ಮ ಆರೋಗ್ಯವನ್ನ ಕಾಪಾಡಿಕೊಳ್ಳೋ ಯೋಚನೆ-ಯೋಜನೆಗಳನ್ನ ಹಾಕಿಕೊಳ್ಳದಿದ್ದರೆ   " ವೈದ್ಯೋ ನಾರಾಯಣೋ ಹರಿಃ "( ನಾರಾಯಣ ಸಮನಾದ ವೈದ್ಯನೋರ್ವ ನಮ್ಮ ನೋವುಗಳನ್ನ ನಿವಾರಿಸುತ್ತಾನೆ) ಕೂಡ ಕೈಕಟ್ಟಿ ಕೂರುವಂತಾಗೋದು ದೂರದಲ್ಲಿಲ್ಲ.
                   ಈ " ವೈದ್ಯೋ ನಾರಾಯಣೋ ಹರಿಃ "ಮಾತನ್ನ ರೂಡಿಗೆ ತಂದವರು ಬಹುಶ ನಾರಾಯಣನಿಗೆ ಕಾಯಿಲೆ ಬರುತ್ತೋ ಇಲ್ಲವೋ ಅನ್ನೋ ಕಲ್ಪನೆಯನ್ನ ಮಾಡಿರಲಿಕ್ಕಿಲ್ಲ. ಹೌದು!!! ವೈದ್ಯರಿಗೆ ಖಾಯಿಲೆಗಳು ಬರಲ್ವ? ಬರ್ತವೆ ಸ್ವಾಮಿ, ಜನಸಾಮಾನ್ಯರಿಗಿಂತ ಸ್ವಲ್ಪ ಜಾಸ್ತಿನೆ ಅನ್ನಿಸೋವಷ್ಟು ಖಾಯಿಲೆಗಳಿಗೆ ತುತ್ತಾಗೋ ವೃತ್ತಿ ನಮ್ಮದು. ರೋಗಿಗೆ ಬರುವ ಪ್ರತಿಯೊಂದು ರೋಗವು ಕೂಡ (ಅದರಲ್ಲೂ ಸಾಂಕ್ರಾಮಿಕವಾಗಿ ಹರಡುವ ರೋಗಗಳು) ವೈದ್ಯನನ್ನ ಚುಂಬಿಸಿ ಹೋಗೋ ಸಾಧ್ಯತೆಗಳು ಅಪಾರ. ಹೀಗೆ ಏಕಾಏಕಿ ಎಲ್ಲರು ರೋಗಕ್ಕೆ ತುತ್ತಾಗುತ್ತಿರೋ ಸಾಂಕ್ರಾಮಿಕ ಸ್ಥಿತಿ ನಮಗೆ ಈಗ ಬಂದೊದಗಿದೆ.
                    ಮಂಗಳೂರಿನಲ್ಲಿ "ಇಲಿ ಜ್ವರ"ದ ಚಳಿಯಾದರೆ, ನಮ್ಮ ಬೆಂದಕಾಳೂರಿನಲ್ಲಿ "ಡೆಂಗು ಜ್ವರ"ದ ಡಂಗೂರ. ಪ್ರತಿದಿನ ಒಂದಿಲ್ಲೊಂದು ಕಡೆ ಡೆಂಗುಗೆ ಬಲಿ, ಹಸುಳೆ-ಬಾಲಕಿ-ವೃದ್ದ, ಹೀಗೆ ಆಬಾಲವ್ರುದ್ದರಾಗಿ ಎಲ್ಲರನ್ನು ಕಾಡುತ್ತಿರುವ   ರೋಗ "ಡೆಂಗು". ವಿಪರ್ಯಾಸ ಅಂದರೆ ಇದರ ಕಬಂಧ ಬಾಹುಗಳಿಗೆ ಸಿಲುಕಿ ನಾನು ಕೂಡ ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದೇನೆ. ಆದ ಕಾರಣ ಈ ರೋಗದ ಗುಣಲಕ್ಷಣಗಳನ್ನ ಸವಿವರವಾಗಿ ತಿಳಿಸಿ, ಸಾಧ್ಯವಾದಷ್ಟು ಮುಂಜಾಗೃತೆ ವಹಿಸುವಂತೆ ಹೇಳೋ ಸಣ್ಣ ಪ್ರಯತ್ನವನ್ನ ಈ ಬ್ಲಾಗ್ ಮೂಲಕ ಮಾಡುವ ಪ್ರಯತ್ನ. 
                         ಜನಸಾಮಾನ್ಯರು ಸುಲಭವಾಗಿ ಗುರುತಿಸಬಹುದಾದ ಈ ರೋಗದ ಪ್ರಮುಖ ಗುಣಲಕ್ಷಣಗಳು- 
  1. ವಿಪರೀತ ಜ್ವರ- 101 ರಿಂದ 102 ಡಿಗ್ರಿ , ಕೆಲವೊಮ್ಮೆ 104 ಡಿಗ್ರಿ ವರೆಗೂ ಹೋಗುತ್ತದೆ. ಜ್ವರದ ಮಾತ್ರೆ ತೆಗೆದುಕೊಂಡ ಕೆಲವು ಘಂಟೆಗಳ ಕಾಲ ( ಒಂದು ಅಥವಾ ಎರಡು ಘಂಟೆ) ಸ್ವಲ್ಪ ಮಟ್ಟಿಗೆ ಕಡಿಮೆ ಅನ್ನಿಸಿದರು ಕೂಡ, ಮತ್ತೆ ಅಷ್ಟೇ ತೀವ್ರತೆಯ ಜ್ವರ ಮರಕಳಿಸುತ್ತದೆ. 
  2. ಸಹಿಸಲಸಾಧ್ಯವಾದಷ್ಟು ಬೆನ್ನು ನೋವು, ಜೊತೆಗೆ ಕೈ ಕಾಲು ಸೋಲು ಬರುವುದು. ಬೆನ್ನು ನೋವಿನ ತೀವ್ರತೆ ನಿಮಗೆ ಸೀದಾ ಮಲಗಲು ಕೊಡುವುದಿಲ್ಲ.                                                                                                        
ಈ ಮಟ್ಟಿಗಿನ ಜ್ವರ + ಬೆನ್ನು ನೋವು ಬೇರೆ ರೀತಿಯ ಜ್ವರಗಳಲ್ಲಿ ಕಾಣಸಿಗುವುದು ಕಡಿಮೆ ಅಂತಲೇ ಹೇಳಬೇಕು ಮತ್ತು ನಿಮ್ಮನ್ನ ಈ ರೋಗದೆಡೆ ಎಚ್ಚರಿಸಬೇಕು.
                         ಎರಡರಿಂದ  ಮೂರು ದಿನ ಈ ರೀತಿಯ ವಿಪರೀತ ಜ್ವರ ಮುಂದುವರಿಯುತ್ತದೆ. ಈ ಸಮಯದಲ್ಲೇ ನೀವು ವೈದ್ಯರನ್ನ ಕಂಡು ಸೂಕ್ತ ಪರೀಕ್ಷೆಗಳನ್ನ ಪಡೆಯುವುದು ಬಹಳ ಮುಖ್ಯ. ಯಾಕಂದರೆ ಈ ಜ್ವರದ ಸಂಚಿಕೆ ಮುಗಿದ ನಂತರದ   ರೋಗದ ಗುಣಲಕ್ಷಣಗಳಲ್ಲಿ ಅತೀ ಅಂದರೆ ಅತೀ ಮುಖ್ಯವಾದ, ನಿಮ್ಮ ರಕ್ತದಲ್ಲಿ ಇರುವ ಪ್ಲೇಟ್ಲೆಟ್ಸ್(PLATELETS) ಕಡಿಮೆಯಾಗಲು ಶುರುವಾಗುತ್ತದೆ. ನಮ್ಮ ದೇಹದ ರಕ್ತವನ್ನ ಹೆಪ್ಪುಗಟ್ಟಿಸುವ ಕಾರ್ಯ ಈ ಪ್ಲೇಟ್ಲೆಟ್ಸ್ ಗಳದ್ದು. ಇವು ಕಡಿಮೆಯಾದಷ್ಟು ರಕ್ತ ದ್ರವ್ಯ ರೂಪದಲ್ಲೇ ಉಳಿದುಕೊಂಡು ,ರಕ್ತಸ್ರಾವ ಆಗಲು ಅನುಕೂಲಕರ ವಾತಾವರಣ ಉಂಟಾಗುತ್ತದೆ. ಮೇಲೆ ಹೇಳಿದಂತೆ ರಕ್ತ ಸ್ರಾವ ಆದರೆ ಅದನ್ನ ನಿಯಂತ್ರಿಸಲು ಅಗತ್ಯ ರಕ್ತ ಕಣ ಇಲ್ಲದೆ ಮನುಷ್ಯ ವಿವಿಧ ಅಂಗಾಂಗಗಳ ವೈಪಲ್ಯ ಉಂಟಾಗಿ ಸಾವನ್ನಪ್ಪುತ್ತಾನೆ.
                 ಇದೆಲ್ಲದರ ಮುನ್ಸೂಚನೆಯಂತೆ  ಹೊಟ್ಟೆ ನೋವು, ತಲೆ ನೋವು ಶುರುವಾದರೆ ನಿಮ್ಮ ರೋಗ ಉಲ್ಭಣಗೊಳ್ಳುತ್ತಿದೆ ಎಂದರ್ಥ. ಅದು ಅಪಾಯದ ಮುನ್ಸೂಚನೆಯು ಹೌದು. ಆದ್ದರಿಂದ ಯಾವುದೇ ಜ್ವರ ಇರಲಿ, ತಕ್ಷಣ ಪರೀಕ್ಷೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆದರೆ ಒಳ್ಳೆಯದು. ಅಲ್ಲದೆ ಈ ರೋಗ ಬಂದವರೆಲ್ಲರೂ ಸಾಯುವ ಸ್ತಿತಿ ತಲುಪುವುದಿಲ್ಲ. ಪ್ಲೇಟ್ಲೆಟ್ಸ್ ಕಡಿಮೆ ಆದರೆ ಸೂಕ್ತ ಗುಂಪಿನ ಪ್ಲೇಟ್ಲೆಟ್ಸ್ ಅನ್ನು ರಕ್ತದಾನ ದ ರೀತಿ ರೋಗಿಗೆ ನೀಡಿ ಆತನ ಪ್ಲೇಟ್ಲೆಟ್ಸ್ ಸಂಖ್ಯೆ ಯನ್ನ ವೃದ್ದಿಸಬಹುದು. ಹಾಗಾಗಿ ಈ ರೋಗ ಬಂದರೆ ಅನಗತ್ಯವಾಗಿ ಹೆದರುವ ಅಗತ್ಯ ಇಲ್ಲ. ನನ್ನನ್ನ ಉಪಚರಿಸಿದ ವೈದ್ಯರು ಸೊಗಸಾಗಿ ಹೇಳಿದ ರೀತಿ ನಿಮಗೆ ರುಚಿಸಬಹುದು. "ಡೆಂಗು" ಕೂಡ ಯಾವುದೇ ಬೇರೆ ರೀತಿಯ ವೈರಲ್ ಜ್ವರ ಇದ್ದಂತೆ. ಆದರೆ ವೈರಲ್ ಜ್ವರಗಳಲ್ಲಿ ಇದು "ಶಾರುಖ್ ಖಾನ್ "ಇದ್ದಂಗೆ. ಅನಗತ್ಯ ಪ್ರಚಾರ , ಆದರೆ ಅಷ್ಟೇ ಪ್ರಮುಖವಾದದು ಕೂಡ. ಸಿನಿಮಾದಲ್ಲಿ ಎಷ್ಟೋ ನಟರಿದ್ದರು ಶಾರುಖ್ ಗೆ ಪ್ರಾಮುಖ್ಯತೆ ಜಾಸ್ತಿ ಇರುವಂತೆ ವೈರಲ್ ಜ್ವರಗಳಲ್ಲಿ "ಡೆಂಗು" ಗೆ ಪ್ರಾಮುಖ್ಯತೆ. ಅಷ್ಟೇ. ಅನಗತ್ಯ ಭಯ ಬೇಡ. ಹಾಗೆ ನಿರ್ಲಕ್ಷ್ಯ ಬೇಡವೇ ಬೇಡ.
                        ಹಾಗಾದರೆ ಇದನ್ನ ತಡೆಗಟ್ಟಲು ಸಾಧ್ಯವಿಲ್ಲವೇ? ಕಂಡಿತ ಸಾಧ್ಯ.

  1. ಡೆಂಗು ಹರಡುವುದು "ಎಡೆಸ್" ಎಂಬ ಸೊಳ್ಳೆಯ ಕಡಿತದಿಂದ. ಇದು ಶುದ್ದ ನೀರಿನಲ್ಲಿ, ಅಂದರೆ ನಮ್ಮ ಮನೆಯ ಅಡಿಗೆ ಮನೆಯಲ್ಲಿ ಎಲ್ಲೋ ಮೂಲೆಯಲ್ಲಿ ಶೇಖರಿಸಿರೋ ನೀರು, ಅಥವಾ ಚಾವಣಿ ಮೇಲೆ ನಿಂತ ಮಳೆ ನೀರು, ಮನೆಯ ಬಳಿ ಇರುವ ಕಸದ ಗುಡ್ಡೆಯಲ್ಲಿ ಇರೋ ಯಾವುದೊ ಚಿಪ್ಪು-ಬಾಟಲಿ ಯಲ್ಲಿ ನಿಂತ ಸ್ವಲ್ಪವೇ ಸ್ವಲ್ಪ ನೀರು ಕೂಡ ಇದರ ವಾಸ ಸ್ಥಾನ. ಇಂತ ಅನಾವಶ್ಯಕವಾಗಿ ಶೇಕರಿಸಿರೋ ನೀರನ್ನ ಆದಷ್ಟು ಹುಡುಕಿ ಶುಚಿ ಮಾಡಿ. ಮನೆಯ ಬಳಿ, ಚಾವಣಿಯ ಮೇಲೆ, ಬಾತ್ ರೂಮ್ನಲ್ಲಿ ಇರೋ ಸಣ್ಣ ಸಣ್ಣ ಸಂಧಿಗಳು ನೀರು ನಿಲ್ಲೋ ಅಂತ ಜಾಗಗಳನ್ನ ರಿಪೇರ್ ಮಾಡಿ.
  2. ಅಲ್ಲದೆ ಈ ಸೊಳ್ಳೆ ಕಚ್ಚುವುದು ಬಹಳಷ್ಟ ಸಲ ದಿನದ-ಬೆಳಕಿನ ಸಮಯದಲ್ಲಿ. ಆದ್ದರಿಂದ ಹಗಲ ಹೊತ್ತು ಸಹ ಸೊಳ್ಳೆ ಇಂದ ಸೂಕ್ತ ನಿಯಂತ್ರಣ ಸಾಧನಗಳನ್ನ ಉಪಯೋಗಿಸಿ.
  3. ಆದಷ್ಟು ಹೊರ ಜಾಗಗಳಿಗೆ ಪ್ರಯಾಣವನ್ನ ಈ ಮಳೆಗಾಲ ಮುಗಿಯುವವರೆಗೂ ಕಡಿಮೆ ಮಾಡಿ.
  4. ಮಕ್ಕಳನ್ನ ಸಂಜೆಯ ವೇಳೆ ಆಟಕ್ಕೆ ಕಳುಹಿಸುವಾಗ ಅವರು ಕಸ-ನೀರು ಇಂತ ಜಾಗಗಳಿಂದ ದೂರವೇ ಇರುವಂತೆ ನೋಡಿಕೊಳ್ಳಿ.
  5. ಮನೆಯ ಸುತ್ತಮುತ್ತ ಕಸವನ್ನ ಆದಷ್ಟು ಹಾಕುವುದು ಕಡಿಮೆ ಮಾಡಿ, ಸೂಕ್ತ ಜಾಗದಲ್ಲೇ ವಿಲೇವಾರಿ ಮಾಡಿ. 
ನಮ್ಮ ಕಡೆ ಇಂದ ಸಾಧ್ಯವಾದಷ್ಟು ನಿಯಂತ್ರಿಸುವ ಕ್ರಮಗಳನ್ನ ನಾವು ಜರುಗಿಸೋಣ. ಸರ್ಕಾರ ತನ್ನ ಜವಾಬ್ದಾರಿ ಅರಿತು ಕೆಲಸ ಮಾಡಲಿ. ಸರ್ವರಿಗೂ ಒಳ್ಳೆ ಆರೋಗ್ಯ ಇರಲಿ. 

 

Wednesday, October 5, 2011

"ಕತ್ತ್ಲಲ್ಲಿ ಕರಡೀಗೆ ಜಾಮೂನು ತಿನಿಸೋಕೆ ಯಾವತ್ತು ಹೋಗ್ಬಾರ್ದು ರೀ...."

ನಮ್ಮ ದೇಶದಲ್ಲಿ ಪ್ರಶಸ್ತಿಗಳಿಗೆ ಬರ ಅನ್ನೋದೇ ಇಲ್ಲ. ವರ್ಷದಲ್ಲಿ ಏನಿಲ್ಲ ಅಂದರೂನು ದಿನಕ್ಕೊಂದು ಪ್ರಶಸ್ತಿಯನ್ನ ನಮ್ಮ ಘನತೆವೆತ್ತ ರಾಷ್ಟ್ರಾಧ್ಯಕ್ಷರು ನೀಡುತ್ತಲೇ ಇರ್ತಾರೆ. ಅವುಗಳಲ್ಲಿ ಎಷ್ಟು ಪ್ರಶಸ್ತಿಗಳು ಯೋಗ್ಯರಿಗೆ ಹೋಗುತ್ತವೆ ಅನ್ನೋದು ಮಾತ್ರ ನಿಘೂಡ!! ಇದೆ ಕಾರಣಕ್ಕೋ ಏನೋ ನಮ್ಮ ಪತ್ರಿಕೆಗಳು ಯಾರಾದರು ಪ್ರಶಸ್ತಿಗಳಿಗೆ ಭಾಜನರಾದರೆ, "ಶ್ರೀ ಯವರಿಗೆ ದಕ್ಕಿದ ಪ್ರಶಸ್ತಿ"  ಅಂತಾನೋ , ಇಲ್ಲ "ಪ್ರಶಸ್ತಿಯನ್ನ ಗಿಟ್ಟಿಸಿಕೊಂಡ ಶ್ರೀ.." ಅನ್ನೋ ಮುಖಪುಟ ವರದಿಯನ್ನ ಹಾಕ್ತಾರೆ. ನಮ್ಮ ವೈದ್ಯಕೀಯ ಭಾಷೇಲಿ ಹೇಳೋದಾದ್ರೆ ಖಾಯಿಲೆ ಬಿದ್ದ ವ್ಯಕ್ತಿ ಕಷ್ಟ ಪಟ್ಟು ಸ್ವಲ್ಪ ಊಟ ಮಾಡಿ ಅದೇನಾದ್ರೂ ವಾಂತಿ ಆಗ್ಲಿಲ್ಲ ಅಂದ್ರೆ ದಕ್ಕಿಸ್ಕೊಂಡ ಅಂತ ಹೇಳ್ತಿವಿ. ಅಂದ್ರೆ ಕಷ್ಟಪಟ್ಟು ಒಳಗೆ ಹಾಕಿಕೊಳ್ಳೋ ಕ್ರಿಯೆ. ಅದೇ ರೀತಿ ಗಿಟ್ಟಿಸಿಕೊಳ್ಳೋದು ಅನ್ನೋದು ಕೂಡ self explanatory  ಪದ. ಹೀಗೆ ನೈತಿಕತೆಯಿಲ್ಲದ ಪ್ರಶಸ್ತಿಗಳ ಮಧ್ಯೆ ನಮ್ಮ ಭಾರತೀಯ ಮಿಲಿಟರಿ ಕೊಡುವ ''ಶೌರ್ಯ ಚಕ್ರ'' ಪ್ರಶಸ್ತಿ ಭಿನ್ನವಾಗಿ ನಿಲ್ಲುತ್ತೆ. ಪ್ರಶಸ್ತಿಯ ಮಾನದಂಡವು ಕೂಡ ಅಷ್ಟೇ, ವೈರಿಯ ಜೊತೆ ನೇರವಾಗಿ ಅಲ್ಲದಿದ್ದರೂ, ಧೈರ್ಯ ಸಾಹಸದಿಂದ ಮಾಡುವಂತ self sacrifice ಗೆ ಈ ಪ್ರಶಸ್ತಿ ಮೀಸಲು. ತನ್ನ ಜೀವವನ್ನು ಲೆಕ್ಕಿಸದೆ ಭಯೋತ್ಪಾದಕರನ್ನ ಹೊಡೆದು ಹಾಕಿದ ಕಾಶ್ಮೀರದ ಕನ್ಯೆ ನಮ್ಮ ಕಣ್ಣ ಮುಂದೆ ನಿಲ್ಲೋದು ಈ ಪ್ರಶಸ್ತಿಯ ದೆಸೆಯಿಂದಲೇ. ಅಂತಹ ಎಷ್ಟೋ ವ್ಯಕ್ತಿಗಳನ್ನ ನಾವು ವೈಯಕ್ತಿಕವಾಗಿ ಭೇಟಿ ಮಾಡೋದು ಸಾಧ್ಯವೇ ಇಲ್ಲ. ಅವರುಗಳ ಕಥೆ ಕೇಳಿ ಹೆಮ್ಮೆ ಪಡೋದೇ ದೊಡ್ಡ ವಿಷಯ ಅನ್ಸುತ್ತೆ. ಆದರೆ ಈ ವ್ಯಕ್ತಿಗಳನ್ನ ಇದ್ದಕ್ಕಿದ್ದಂಗೆ ನೆನೆಯೋಕೆ ಕಾರಣ, ಆ ರೀತಿಯ ವ್ಯಕ್ತಿಯೋರ್ವನನ್ನ ನೋಡಿ, ಮಾತಾಡಿಸಿ, ಅವನ ಕಥೆ ಕೇಳಿ ಬೆಚ್ಚಿ ಬೀಳೋ ಪ್ರಸಂಗ ಬಂದಾಗ. ಆ ವ್ಯಕ್ತಿ ನಮ್ಮ ಆಸ್ಪತ್ರೆಯ ಕಥನಗಳ ಒಂದು ಪುಟ. ಅವನ ಪದಗಳಲ್ಲೇ ನನಗೆ ಕಥೆಯನ್ನ ವಿವರಿಸಿದ ಚಿತ್ರಣವನ್ನ ನಿಮಗೆ ಕಟ್ಟಿ ಕೊಡುವ ಪ್ರಯತ್ನ ಮಾಡ್ತೀನಿ. 
"ಅದು ಬೆಳಿಗ್ಗೆ  ಸುಮಾರು 10 :30 ಇರ್ಬೇಕು ಸಾರ್. ಹೊತ್ತಿಗ್ ಮುಂಚೆನೇ ಎದ್ದು ತಿಂಡಿ ತಿನ್ಕಂಡು ಹೊಲದ ಕಡಿಕೆ ಹೋಗಿದ್ದೆ. ನಮ್ದು ಮೆಕ್ಕೆ ಜೋಳದ ಹೊಲ ಸಾರ್, ಚನ್ನಾಗಿ ಬೆಳ್ಕಂಡ್ ಇದ್ದಾವೆ. ಏನಿಲ್ಲ ಅಂದ್ರು ಆರು ಅಡಿ ಅಷ್ಟು ಎತ್ತರ ಇದಾವೆ ಫಸಲು. ಅದರೊಳಗೆ ನಡ್ಕಂಡು ಹೊಯ್ತ ಇದ್ರೆ ಮುಂದೆ ಬರೋರು, ಹಿಂದೆ ಬರೋರು ಯಾರು ಕಾಣಾಕಿಲ್ಲ. ಹೊಲದ ಒಳಗೆ ನಡ್ಕಂಡು ಹೋಗ್ತಾ ಇರ್ಬೇಕಾದ್ರೆ ಎದ್ರುಗಡೆ ಇಂದ ಸರ ಸರ ಸದ್ದು. ಹೆಗ್ಗಣಗಳು ಬಹಳ ಇರದ್ರಿಂದ ಅವೆಲ್ಲ ಮಾಮೂಲು ಅನ್ನೋಹಂಗೆ ನಮಗೆ ಅಭ್ಯಾಸ. ಹಂಗೆ ಮುಂದೆ ಹೊಯ್ತ ಇದ್ದೆ ನೋಡಿ, ಅದೆಲ್ಲಿಂದ ಬಂತೋ ಸಾರ್ ಸೀದಾ ಮೈ ಮೇಲೆ ಎಗರಿ ಹಂಗೆ ನನ್ನನ್ನ ಕೆಳಿಕೆ ಕೆಡವಿ ಕೊಂಡು ಮೇಲೆ ಹತ್ತಿ ನಿಂತು ಬಿಡ್ತು ಸಾರ್. ನನ್ನನ್ನ ನಾನು ಸುಧಾರಿಸ್ಕೊಂಡು ಏನು ಎತ್ತ ಅಂತ ನೋಡೋ ಅಷ್ಟು ಟೈಮ್ ಕೊಡದಂಗೆ ಮೈಮೇಲೆ ಎಗ್ರಿತ್ತು ಸಾರ್. ಆಮೇಲೆ ನೋಡಿದ್ರೆ ಒಂದು ಎಂಟು ಅಡಿ ಎತ್ತರದ ಕರಡಿ ಸಾರ್. ಏನ್ ಮಾಡಿದ್ರು ಬಿಡಿಸ್ಕೊಳ್ಳೋಕೆ ಆಗ್ದಂಗೆ ಪಟ್ಟು ಹಾಕ್ಬಿಟ್ಟಿತ್ತು. ಅದರ ಎರಡೂ ಕೈಯಾಗೆ ನನ್ನ ತಲೆ ಕೂದಲು ಹಿಡ್ಕಂಡು ಕೀಳ್ತಾ ಇದ್ರೆ, ಒಂದು ಕಾಲ್ನ ಹೊಟ್ಟೆ ಮೇಲೆ ಇಟ್ಟಿತ್ತು. ಹಂಗು ಹಿಂಗು ಕೊಸ್ರಾಡ್ಕೊಂಡು ಸ್ವಲ್ಪ ಸಡಿಲ ಮಾಡ್ಕೊಂಡೆ ಸಾರ್. ಯಾವಾಗ್ ನಾನು ಬಿಡಿಸ್ಕೊಳ್ಳೋಕೆ  ನೋಡ್ತಾ ಇದ್ದೀನಿ ಅಂತ ಗೊತ್ತಾಯ್ತೋ ನೋಡಿ, ಹಂಗೆ ನನ್ನ ತೊಡೆಗೆ ಬಾಯಿ ಹಾಕಿ ಕಚ್ಚಿ ಬಿಡ್ತು ಸಾರ್. ಅಬ್ಬ! ಹೇಳಬಾರದು ಸಾರ್. ನೋವು ಅಂದ್ರೆ ಅವರಮ್ಮನ್ ಯಾವ ನನ್ನ ಮಗಂಗೂ ಬೇಡ ಸಾರ್ ಅದು. ನಾನು ಹೊಂಟೆ ಹೋದೆ ಅಂದ್ಕಂಡೆ ಸಾರ್ ಅವಾಗ. ಹಂಗು ಹಿಂಗು ಮಾಡಿ ನನ್ನ ಬಲಗೈನ ನನ್ನ ತೊಡೆ ಹತ್ರ ತಗಂಡು ಹೋಗಿ, ಹೆಬ್ಬೆಟ್ನ ಅದ್ರ ಬಾಯೊಳಗೆ ಇಟ್ಟೆ. ಸ್ವಲ್ಪ grip ತಗಂಡು ನನ್ನ ಎರಡೂ ಕಾಲ್ನ ಎತ್ತಿ ಅದ್ರ ಎದೆಗೆ ಜಾಡ್ಸಿ ಒದ್ದೆ ನೋಡಿ ಸಾರ್. ಸ್ವಲ್ಪ ಹಂಗೆ ಹಿಂದಕ್ಕೆ ಸರ್ಕಂತು. ಸಿಕ್ಕಿದೆ ಟೈಮು ಅಂತ ಅದ್ರ ಬಾಯೊಳಗೆ ಹಾಕಿದ್ದ ಬೆಟ್ತ್ನ ಇನ್ನ ಒಳಗೆ ಹಾಕಿ ಕೈಯಿಂದ ಅದ್ರ ಮುಖನ ಹಿಂದೆ ತಳ್ಳಿದೆ ಸಾರ್. ಆಗ ತೊಡೆಗೆ ಹಾಕಿದ ಬಾಯಿ ಬಿಡ್ತು. ಇನ್ನೊಂದ್ ಸಲ ಜಾಡ್ಸಿ ಒದ್ದ ಮೇಲೆ ಹಿಂದೆ ಹೋಗಿದ್ದು, ಅದೇನ್ ಅನ್ನಿಸ್ತೋ ಏನೋ ಬಿಟ್ಟು ಓಡಿ ಹೋತು ಸಾರ್. ಅದೃಷ್ಟ ಇತ್ತು ಸಾರ್, ಇಲ್ಲ ಅಂದ್ರೆ ಅದು ನನ್ನ ಕೊಂದಾಕಿ ಹೋಗಿದ್ರುನು ನಮ್ಮ ಊರೊರಿಗೆ ಇಲ್ಲ ಮನೆವ್ರಿಗೆ ತಿಳಿಯೋಕೆ ಮೂರು ಇಲ್ಲ ನಾಕು ದಿನ ಆಗೋದು. ಜೋಳ ನೋಡಿ, ಅಷ್ಟು ಎತ್ತರ ಬೇರೆ ಇರೋದ್ರಿಂದ ವಾಸನೆ ಬಂದ ಮೇಲೇನೆ ತಿಳಿಯೋದು ಜನಕ್ಕೆ. ಅದೇನೋ ಸಾರ್, ಬಿಡಿಸ್ಕೊಂಡು ಬಂದು ನಿಮ್ ಮುಂದೆ ಕುಂತಿದ್ದಿನಿ ನೋಡಿ ಸಾರ್."
ಅವನ ಗಾಯಗಳಿಗೆ ಡ್ರೆಸ್ಸಿಂಗ್ ಮಾಡ್ತಾ ಇದ್ದ ನನ್ನ ಕೈಗಳು ತಾವಾಗೆ ತಮ್ಮ ವೇಗವನ್ನ ಕಡಿಮೆ ಮಾಡಿದ್ವು. ಅವನ ಕಥೆ ಕೇಳಿ ಎರಡು ನಿಮಿಷ ಏನು ಪ್ರತಿಕ್ರಿಯೆ ನೀಡಬೇಕು ಅನ್ನೋದೇ ತೋಚಲಿಲ್ಲ. ಯಾಕಂದ್ರೆ ಮೈಸೂರು zoo ನಲ್ಲಿ ಪಂಜರದ ಹಿಂದೆ ಪ್ರಾಣಿಗಳನ್ನ ನೋಡಿ ಬೆಳೆದ ತಲೆಮಾರು ನಮ್ಮದು. ಅನಿಮಲ್ ಪ್ಲಾನೆಟ್ ಗಳಲ್ಲಿ ಕ್ರೂರವಾಗಿ ವರ್ತಿಸೋ ರೀತಿಯನ್ನ ನೋಡಿ ತಿಳಿದುಕೊಳ್ಳೋ ವ್ಯವಸ್ಥೆ ಇರೋ ಸಮಾಜದ ನಡುವೆ ಇರೋರು ನಾವುಗಳು. ಅಂತಾದ್ದರಲ್ಲಿ ನನ್ನ ಮುಂದೆ ಇರೋ ವ್ಯಕ್ತಿ ಒಂದು ಮೃಗದ ಜೊತೆ ಕಾದಾಡಿ ಬಂದು ಕುಂತಿದ್ದಾನೆ. ಆದರೆ ಅವನು ಆ ಮೃಗವನ್ನ ಗೆದ್ದು ಬಂದ ಸಾಹಸವನ್ನ ಹೇಳೋವಾಗ ಕೊಂಚವೂ ಕೂಡ ಹಮ್ಮು-ಬಿಮ್ಮು ಇಲ್ಲದೆ ಹೇಳಿದ ರೀತಿ ನಿಜಕ್ಕೂ ಮೆಚ್ಚುವಂತಾದ್ದು.
ದಿನಾ ಬೆಳಗ್ಗೆಯಿಂದ ಸಂಜೆ ತನಕ ಕೆಲಸ ಮಾಡಿದಕ್ಕೆ ನಮ್ಮ ಪ್ರಾಣ ತಿಂದುಬಿಟ್ಟ ಮ್ಯಾನೇಜರ್ ಅಂತ ಬೈಯ್ಯೋ ಮುಂಚೆ, ಸಣ್ಣದಾಗಿ ಕಾಯಿಲೆ ಬಿದ್ರೆ ನಂಗೆ ಯಾಕಪ್ಪ ಬಂತು ಅಂತ ಗೋಳಾಡೋ ಮುಂಚೆ, ಜೀವನದಲ್ಲಿ ಅಂದ್ಕೊಂಡಿದ್ದು ಅಂದಕೊಂಡಂಗೆ ಸಿಗ್ಲಿಲ್ಲ ಅಂತ ಜಿಗುಪ್ಸೆ ಪಡೋ ಮುಂಚೆ ನಮ್ಮ ನಡುವೆ ಬಾಳೋ ಈ ರೀತಿ ವ್ಯಕ್ತಿಗಳನ್ನ ನೋಡಿ ಕಲಿಯೋದು ಸಾಕಷ್ಟಿದೆ ಅಲ್ವೇ? ಮೇಲೆ ಹೇಳಿದ ವ್ಯಕ್ತಿ ತರ ಕಾಡಿಗೆ ಹೋಗೋದು ಬೇಡ, ಮನೆಲೇನೆ ರಾತ್ರಿ ಕತ್ತಲಿನಲ್ಲಿ ಬಾತ್ ರೂಂ ಗೆ ಹೋಗೋವಾಗ ಅಚಾನಕ್ ಆಗಿ ಮೈ ಮೇಲೆ ಒಂದು ಇಲಿ ಬಿದ್ರೆ ಹೆಂಗಿರತ್ತೆ ನಮ್ ರಿಯಾಕ್ಶನ್ ಅಲ್ವಾ???? 
ಕಾಕತಾಳೀಯವೋ ಏನೋ , ಈ ಬ್ಲಾಗ್ ಬರೆಯೋವಾಗ ಯೋಗರಾಜ್ ಬಟ್ಟರು ಬರೆದಿರೋ ಹಾಡನ್ನ ಕೇಳ್ತಾ ಇದ್ದೆ. ಸರಿಯಾಗೇ ಬರದಿದ್ದರೆ ಅನ್ನಿಸ್ತು "ಕತ್ತ್ಲಲ್ಲಿ ಕರಡೀಗೆ ಜಾಮೂನು ತಿನಿಸೋಕೆ ಯಾವತ್ತು ಹೋಗ್ಬಾರ್ದು ರೀ...."

Thursday, July 7, 2011

"ರಕ್ತ ಕಣ್ಣೀರು"

ಮೊನ್ನೆಯ ದಿನ ಹಳೆಯ ದಿನಪತ್ರಿಕೆಗಳನ್ನ ಗಂಟು ಕಟ್ಟಿ ಇಡೋವಾಗ ಜನವರಿ ತಿಂಗಳಿನ ಲವಲVK ನನ್ನ ಗಮನ ಸೆಳೆಯಿತು. ಅದರಲ್ಲಿ ಓದುಗರೊಬ್ಬರು ತಮಗಾದ ಒಂದು ಅನುಭವವನ್ನ ಹಂಚಿಕೊಂಡಿದ್ದರು. ಒಬ್ಬ ವೃದ್ದ ತಂದೆ ಆಸ್ಪತ್ರೆಯಲ್ಲಿ ದಾಖಲಾದ ತನ್ನ ಮಗನಿಗೆ ಅವಶ್ಯಕತೆಯಿದ್ದ ರಕ್ತಕ್ಕಾಗಿ ಇಡಿ ಊರು ತಿರುಗಾಡಿ ಕೊನೆಗೆ ಈ ಓದುಗನ ಬಳಿ ಬಂದು ತನ್ನ ಪರಿಸ್ಥಿತಿ ವಿವರಿಸಿ ಇವರನ್ನ ರಕ್ತದಾನ ಮಾಡಲು ಕರೆದೊಯ್ದಿದ್ದರಂತೆ. ಆದರೆ ಆ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷಿಸಿದ ವೈದ್ಯರು ಇವರ ರಕ್ತದ ಗುಂಪು ಹೊಂದುವುದಿಲ್ಲವೆಂದು ನಿರಾಕರಿಸಿದಾಗ ಆ ವೃದ್ದ ತಂದೆ ಇಟ್ಟುಕೊಂಡಿದ್ದ ಸಣ್ಣ ಆಸೆ ಬತ್ತಿದಂತಾಗಿದ್ದನ್ನು ನೋಡಿ ಸಹಿಸಲಾಗದೆ ರಕ್ತವನ್ನ ಆಸ್ಪತ್ರೆಯಲ್ಲಿ ಹೊಂದಿಸಲಾಗದ ವೈದ್ಯರ ಮೇಲೆ ಸಿಟ್ಟು ತೋರ್ಪಡಿಸುತ್ತ "ರಾಕ್ಷಸ"ರ ರೀತಿಯಲ್ಲಿ ಗೋಚರಿಸಿದರು ಅನ್ನೋದನ್ನ ಹಾಗು ಆ ವೃದ್ದ ತಂದೆಯ ನೋವಿಗೆ ಸ್ಪಂದಿಸುವಂತೆ ಆ ಲೇಖನವನ್ನ ಬರೆದಿದ್ದರು. ಬಹುಶ ಆ ತಂದೆಯ ಗೋಳು ನೋಡಿ ಕೆಲವು ವಸ್ತುಸ್ಥಿತಿಗಳನ್ನು ತಿಳಿಯದೆ ಹಾಗು ಯಾರ ಬಳಿಯೂ ವಿಚಾರಿಸದೆ ಭಾವೋದ್ವೇಗದಲ್ಲಿ ಬರೆದಿರಬೇಕು. ಅವರ ಲೇಖನ ಓದಿದ ನಂತರ ಕೆಲವು ವಿಷಯಗಳನ್ನ ಜನಸಾಮಾನ್ಯರಿಗೆ ಸ್ಪಷ್ಟಪಡಿಸದ ಹೊರತು ಈ ರೀತಿಯ ಅಪನಂಬಿಕೆಗೆಗಳು ಸರ್ವೆಸಾಮನ್ಯವಾಗಿಬಿಡುತ್ತವೆ. ಇದನ್ನ ಸ್ವಲ್ಪ ಮಟ್ಟಿಗೆ ನಿವಾರಿಸುವ ನಿಟ್ಟಿನಲ್ಲಿ ಕೆಲವು ವಿಷಯಗಳನ್ನ ಹರವಿಡುತ್ತಿದ್ದೇನೆ.
೧) ಪ್ರತಿಯೊಬ್ಬ ವ್ಯಕ್ತಿಯು ತನ್ನದೊಂದು ರಕ್ತದ ಗುಂಪು ಹೊಂದಿರುವುದು ನಮಗೆಲ್ಲ ತಿಳಿದೇ ಇರುತ್ತದೆ. ಅದು A, B, AB  ಅಥವಾ O ಆಗಿರಬಹುದು. ಹಾಗೆಯೇ Rh system ಅನ್ನೋ ವಿಧಾನದಿಂದ ರಕ್ತದ ಗುಂಪಿನ ಜೊತೆಗೆ ಅದು Positive  ಅಥವಾ Negative  ಅಂತ ವಿಂಗಡಿಸುತ್ತೇವೆ. ಹಾಗಾಗಿ ಒಬ್ಬ ವ್ಯಕ್ತಿಗೆ ರಕ್ತದ ಅವಶ್ಯಕತೆ ಇದ್ದರೆ, ಅವನಿಗೆ ತನ್ನದೇ ಗುಂಪಿನ  Rh system ಕೂಡ ಹೊಂದುವಂತಹ ರಕ್ತವನ್ನೇ ನೀಡಬೇಕಾಗುತ್ತದೆ. ಒಂದು ವೇಳೆ ಬೇರೆ ಗುಂಪಿನ ರಕ್ತ ನೀಡಿದಲ್ಲಿ reaction ಆಗಿ ವ್ಯಕ್ತಿ ಸಾಯುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಆದಕಾರಣ ಆಸ್ಪತ್ರೆಯಲ್ಲಿ ನೀವು ನಿಮ್ಮ ಸ್ನೇಹಿತನಿಗೋ ಅಥವಾ ಇನ್ನರಿಗಾದರು ಬಯಸಿಯೂ ರಕ್ತದಾನ ಮಾಡಲು ಇಚ್ಚಿಸಿದಾಗ ನಿಮ್ಮ ಮತ್ತು ರೋಗಿಯ ರಕ್ತ ಗುಂಪಿನಲ್ಲಿ ಹೊಂದಾಣಿಕೆಯಾಗದ  ಕಾರಣ ನೀಡಿ ನಿಮ್ಮ ರಕ್ತ ಬಳಸಲು ವೈದ್ಯರು ನಿರಾಕರಿಸಿದರೆ ಅದು ರೋಗಿಯ ಹಿತದೃಷ್ಟಿಯಿಂದಲೇ ಅನ್ನೋದು ತಿಳಿಯಬೇಕು.
೨) ಇನ್ನೂ ಕೆಲವೊಮ್ಮೆ ನಿಮ್ಮ ರಕ್ತದ ಗುಂಪು ನೀವು ದಾನ ಮಾಡಲಿಚ್ಚಿಸಿದ ರೋಗಿಯ ರಕ್ತದ ಗುಂಪಿನೊಂದಿಗೆ ಹೊಂದಾಣಿಕೆಯಾದರು ಸಹ, ನೀವು ಜ್ವರದಿಂದ ಬಳಲುತ್ತಿದ್ದರೆ, ಅಥವಾ ೪೫ ಕಿಲೋಗಿಂತ ಕಡಿಮೆ ತೂಕವಿದ್ದರೆ, ಅಥವಾ ನಿಮ್ಮಲ್ಲಿ ಏನಾದ್ರೂ ರಕ್ತದಿಂದ ಹರಡಬಹುದಂತ ರೋಗಾಣುಗಳಿದ್ದಲ್ಲಿ ನಿಮ್ಮ ರಕ್ತವನ್ನ ಬೇರೆಯವರಿಗೆ ನೀಡಲು ಬರುವುದಿಲ್ಲ.
೩) ಮೇಲಿನ ಎರಡು ವಿಷಯಗಳು ಎಲ್ಲರಿಗು ತಿಳಿದಿರುವ ಸಾಧ್ಯತೆ ಇದೆ. ಇವೆರಡಕ್ಕಿಂತ ಮುಖ್ಯವಾದ ಮತ್ತು ರೋಗಿಯ ಸಂಬಂಧಿಕರು ಸಾಮಾನ್ಯವಾಗಿ ಕೇಳುವ ಪ್ರಶ್ನೆ ಎಂದರೆ "ನಮ್ಮ ಕಡೆಯ ಹುಡುಗರೇ ರಕ್ತದಾನ ಮಾಡಿದರು ಕೂಡ ರಕ್ತ ನಿಧಿ ಘಟಕದವರು test  ಮಾಡಲು ದುಡ್ಡು ಕಟ್ಟಲು ಕೇಳುತ್ತಿದ್ದಾರೆ. ನಮ್ಮದೇ ರಕ್ತಕ್ಕೆ ನಾವು ಮತ್ತೆ ದುಡ್ಡು ಕಟ್ಟಬೇಕಾದ್ದು ಯಾಕೆ?". ಇಲ್ಲಿ ನಿಮ್ಮ ಕಡೆಯ ವ್ಯಕ್ತಿಯೇ ರಕ್ತದಾನ ಮಾಡಿದರು ಕೂಡ, ಹಾಗು ಆ ವ್ಯಕ್ತಿ ಬಾಹ್ಯವಾಗಿ ಆರೋಗ್ಯವಂತನಂತಿದ್ದರು, ಅವನ/ಳ ರಕ್ತದಲ್ಲಿ ರೋಗಲಕ್ಷಣಗಳಿಲ್ಲದೆ ವಾಸಿಸುವ ರೋಗಾಣುಗಳು ಇರಬಹುದು. ಹಾಗಾಗಿ ಅಂತಹ ರೋಗಾಣುಗಳನ್ನ ಪತ್ತೆ ಹಚ್ಚುವ ಸಲುವಾಗಿ ಕೆಲವು ಪರೀಕ್ಷೆಗಳನ್ನ ರಕ್ತದ ಮೇಲೆ ಮಾಡುವುದು ಅನಿವಾರ್ಯ ಹಾಗು ಈ ಪರೀಕ್ಷೆಗಳಿಗೆ ನಿಮಗೆ ಹಣ ಕಟ್ಟಲು ಹೇಳುತ್ತಾರೆ ವಿನಃ ಇನ್ಯಾವುದೇ ಕಾರಣಕ್ಕಾಗಿ ಅಲ್ಲ. ಆ ರೋಗಾಣುಗಳು ಯಾವುವು ಎಂದು ಕೇಳಿದರೆ ಬಹುಶ ನಿಮಗೆ ಅವುಗಳು ಪತ್ತೆಯ ಮಹತ್ವ ತಿಳಿಯಬಹುದು- HIV , Hepatitis , Syphilis ಇವು ಪ್ರಮುಖವಾದವು. ತಡೆಯಬಹುದಾದಗಳು ಇಂತಹ ರೋಗಗಳನ್ನ ರಕ್ತದ ಮೂಲಕ ರೋಗಿಗೆ ಹರಡುವುದು ಯಾವ ನ್ಯಾಯ ಅಲ್ಲವ? ಹಾಗಾಗೆ ಆ ಪರೀಕ್ಷೆಗಳು ಮಹತ್ವವನ್ನ ಪಡೆದುಕೊಳ್ಳುತ್ತವೆ.
೪) ಇನ್ನ ಕೆಲವರು "ಎಷ್ಟು ದುಡ್ದಾದರು ಕೊಡುತ್ತೇವೆ ನಿಮ್ಮ ಆಸ್ಪತ್ರೆಯಲ್ಲಿಯೇ ಶೇಖರಿಸಿರುವ ರಕ್ತವನ್ನ ನಮಗೆ ಕೊಡಿ ಎಂದರೆ ಆಸ್ಪತ್ರೆಯವರು ಕೊಡುವುದಿಲ್ಲ. ಆಸ್ಪತ್ರೆಯಲ್ಲಿ ಶೇಖರಿಸಿರುವ ರಕ್ತವನ್ನ ಕೊಡಬೇಕಾದರೆ condition ಹಾಕಿ  ನಿಮ್ಮ ಕಡೆಯವರು ಯಾರಾದರು ರಕ್ತ ಕೊಟ್ಟಲ್ಲಿ (ಅದು ಬೇರೆ ಗುಂಪಿನದ್ದು ಆಗಿದ್ದರು ಸಹ) ನಿಮ್ಮ ರೋಗಿಗೆ ಹೊಂದುವ ಗುಂಪಿನ ರಕ್ತವನ್ನ ಬದಲಾಯಿಸಿ ಕೊಡುತ್ತೇವೆ"ಎಂದು. ಇಲ್ಲಿ ಪ್ರಶ್ನೆ ದುಡ್ದಿನದಲ್ಲ. ಆಸ್ಪತ್ರೆಯಲ್ಲಿ ಶೇಖರಿಸಿರುವ ರಕ್ತ ರೋಗಿಗಳಿಗೆ ಅನ್ನೋದು ಅಷ್ಟೇ ಸತ್ಯ. ಅದನ್ನ ತುರ್ತು ಸಮಯದಲ್ಲಿ ಕೊಡುತ್ತಾರೆ ಅನ್ನೋದು ತಿಳಿದಿರುವ ವಿಷಯವೇ. ಆದರೆ ಒಮ್ಮೆ ಯೋಚಿಸಿ ನೋಡಿ, ಆಸ್ಪತ್ರೆಯವರಿಗಾದರು ಆ ರಕ್ತ ಎಲ್ಲಿಂದ ಬರಬೇಕು? ಅದು ತರಕಾರಿಯೋ ಅಥವಾ ಆಟದ ವಸ್ತುವಲ್ಲ, ಭೂಮಿಯಲ್ಲಿ ಬೆಳೆಯೋಕೆ ಇಲ್ಲ ಅಂಗಡಿಯಲ್ಲಿ ಖರೀದಿಸೋಕೆ. ಒಬ್ಬ ಆರೋಗ್ಯವಂತ ಮನುಷ್ಯನ ದೇಹದಿಂದ ಮಾತ್ರವೇ ರಕ್ತವನ್ನ ತೆಗೆದು ಶೇಖರಿಸಲು ಸಾಧ್ಯ. ಹಾಗಾಗಿ ಎಲ್ಲರಿಗು ಕೇವಲ ದುಡ್ಡಿಗೆ ಹಂಚಿದರೆ, ಉತ್ಪತ್ತಿಯ ಬಗ್ಗೆ ಯಾರು ಗಮನ ಕೊಡಬೇಕು ಹೇಳಿ? ಹಾಗಾಗಿ ಆಸ್ಪತ್ರೆಗಳು ನಿಮ್ಮ ರೋಗಿಗೆ ಹೊಂದುವ ರಕ್ತವನ್ನ ಕೊಡುವ ಮುಂಚೆ ನಿಮ್ಮ ಕಡೆಯವರಿಂದ ಅಷ್ಟೇ ಪ್ರಮಾಣದ ಬದಲಿ ರಕ್ತವನ್ನ ಕೇಳುತ್ತಾರೆ, ಯಾಕಂದರೆ ನಿಮ್ಮ ಕಡೆಯವರ ರಕ್ತದ ಗುಂಪು ನಾಳೆ ಬರುವ ಇನ್ನ್ಯಾವುದೋ ರೋಗಿಯೊಬ್ಬರಿಗೆ ಹೊಂದಿಕೊಳ್ಳಬಹುದು ಮತ್ತು  ನಾಳಿನ ದಿನ ಆಸ್ಪತ್ರೆಗೆ ತುರ್ತು ಸಮಯಕ್ಕೆ ರಕ್ತದ ಕೊರತೆ ಉಂಟಾಗಬಾರದು ಎಂದು. ಇದು ಇದು ಸಮಂಜಸವಲ್ಲವೇ?
  ವಸ್ತುಸ್ಥಿತಿ ಏನೆಂದರೆ ನಮ್ಮ ಆಸ್ಪತ್ರೆಗಳಲ್ಲಿ ರಕ್ತದ ಕೊರತೆ ಬಹಳನೆ ಇದೆ, ಎಷ್ಟೇ ಸ್ವಯಂ ಸೇವಾ ಸಂಘಟನೆಗಳು ಪ್ರಯತ್ನ ಪಟ್ಟರು ಕೂಡ ಇದರ ಕೊರತೆ ನೀಗಿಸೋದರಲ್ಲಿ ಫಲ ಕಾಣೋದು ಅಷ್ಟು ಸುಲಭವಲ್ಲ. ಆದರೆ ಯಾವುದೇ ಸಮಸ್ಯೆ ಕೂಡ ದೊಡ್ಡದಲ್ಲ ಅನ್ನೋದು ಅಷ್ಟೇ ಸತ್ಯ, ಪ್ರತಿಯೊಬ್ಬರೂ ರಕ್ತ ದಾನ ಮಾಡಬಹುದು ಹಾಗು ವರ್ಷಕ್ಕೆ ಎರಡರಿಂದ ಮೂರು ಬಾರಿ ಮಾಡಬಹುದು. ಕನಿಷ್ಠ, ವರ್ಷಕ್ಕೆ ಒಮ್ಮೆ ನಮ್ಮ ಜನ್ಮದಿನದಂದು ರಕ್ತ ದಾನ ಮಾಡೋಣ. ನಮ್ಮ ರಕ್ತದಿಂದ ಇನ್ನೊದು ಜೀವ ಉಳಿದರೆ ನಮ್ಮ ಜನ್ಮದಿನ ಸಾರ್ಥಕವಾದಂತೆ. ಎಲ್ಲದಕ್ಕಿಂತ ಮುಖ್ಯವಾಗಿ ಜನಗಳ ತಿಳವಳಿಕೆಯನ್ನ ಬದಲಿಸೋಣ." ಕೊಳ್ಳೆ ಹೊಡೆದು ಹೋದ ಮೇಲೆ....................." ಹಾಗಾಗೋದು ಬೇಡ. ಎಚ್ಹೆತ್ತುಕೊಳ್ಳೋಣ. ನೀವು ಇದನ್ನ ಓದಿ, ಅದು ಉಪಯುಕ್ತ ಅನ್ನಿಸಿದಲ್ಲಿ ನಿಮ್ಮ ಸ್ನೇಹಿತರಿಗೂ ತಿಳಿಸಿ.

Thursday, April 21, 2011

ಕನ್ನಡದ ಪ್ರೇಕ್ಷಕನಾಗಿ ನಾನು ಡಬ್ಬಿಂಗ್ ವಿರೋಧಿಸುತ್ತೇನೆ!!!

ಕನ್ನಡ ಚಿತ್ರರಂಗದಲ್ಲಿ ಮತ್ತೆ ಡಬ್ಬಿಂಗ್ ವಿವಾದ ಶುರುವಾಗಿದೆ. ಡಬ್ಬಿಂಗ್ ಬೇಕಾ? ಬೇಡವಾ? ಅನ್ನೋ ಚರ್ಚೆ ಎಲ್ಲೆಲ್ಲು ನಡೀತಾ ಇದೆ.  ಡಬ್ಬಿಂಗ್ ಮಾಡೋದು ಎಷ್ಟು ಸರಿ-ತಪ್ಪು ಅನ್ನೋದನ್ನ ನಾನು ವಿಶ್ಲೇಷಣೆ ಮಾಡೋದು ಎಷ್ಟರ ಮಟ್ಟಿಗೆ ಸರಿ ಅನ್ನೋದೇ ಒಂದು ಜಿಜ್ಞಾಸೆ , ಯಾಕಂದ್ರೆ ಅದು ಪೂಜಾರಿನ ಹೋಗಿ ಯಾವ ತಳಿಯ ಕುರಿ ಮಾಂಸ ಚೆನ್ನಾಗಿರತ್ತೆ ಅಂತ ಕೇಳಿದಂಗೆ ಇರತ್ತೆ. ನನಗೂ ಇದಕ್ಕೂ ಸಂಬಂಧವೇ ಇಲ್ಲ ಅನ್ನೋದು ಕಟು ಸತ್ಯ, ಆದರೆ ಈ ನಾಡಿನ ಪ್ರಜೆಯಾಗಿ ನನ್ನ ಅನಿಸಿಕೆಗಳನ್ನ ಹೇಳೋದು ಒಳಿತು ಅನ್ನೋ ದೃಷ್ಟಿಯಿಂದ ಈ ಬ್ಲಾಗ್ ಬರಿತ ಇದ್ದೀನಿ.ನನ್ನ ಕೆಲವು ವಿಚಾರಗಳನ್ನ ನಾನು ಪಟ್ಟಿ ಮಾಡಿ ಹೇಳೋದಾದರೆ-
೧). ಚಲನಚಿತ್ರ ನಮಗೆ ಕೇವಲ ಮನರಂಜನೆಯ ಮಾಧ್ಯಮ, ಆದರೆ ಹಲವರಿಗೆ ಅದು ಉದ್ಯಮ, ಹೊಟ್ಟೆಪಾಡು. ಚಲನಚಿತ್ರಗಳ ನಿರ್ಮಾಣ ನಿಂತು ಹೋದರೆ ಎಷ್ಟೋ ಕುಟುಂಬಗಳು ಬೀದಿಗೆ ಬರೋದು ಖಾಯಂ( ನಿರ್ಮಾಪಕರು ಹಾಗು ನಟರನ್ನ ಬಿಟ್ಟು). ಹಾಗಾಗಿ ಇಂದು ಡಬ್ಬಿಂಗ್ ವಿರೋದಿಸುತ್ತಿರುವ ಚಲನಚಿತ್ರ ಕಾರ್ಮಿಕರು ಅವರ ಹಕ್ಕುಗಳಿಗೆ ಹೊರಾಡುತ್ತಿರೋದು  ತಪ್ಪಲ್ಲ ಅನ್ನಿಸುತ್ತೆ.
೨). ಡಬ್ಬಿಂಗ್ ಮಾಡಿದರೆ ನಾವು ಬೇರೆ ಭಾಷೆಯ ಒಳ್ಳೆ ಚಲನಚಿತ್ರಗಳನ್ನ ನಮ್ಮ ಭಾಷೆಯಲ್ಲಿ ನೋಡಿದಂಗೆ ಆಗುತ್ತೆ ಅನ್ನೋದು ಹಲವರ( ಕೆಲವರ) ವಾದ. ಆದರೆ ಕೇವಲ ಡಬ್ಬಿಂಗ್ ಮಾಡಿದರೆ ಮಾತ್ರ ಅವರ ಚಲನಚಿತ್ರಗಳನ್ನ ನೋಡಬೇಕೆ? ಅದನ್ನ ಅದರದೇ  ಭಾಷೆಯಲ್ಲಿ ನೋಡಬಹುದಲ್ಲವ?
೩). ಆಯ್ತು, ಎಷ್ಟೋ ಜನಕ್ಕೆ ಆ ಭಾಷೆ ಬರೋಲ್ಲ ಅಂತೀರಾ? ಬೇರೆ ಭಾಷೆಯ ಒಳ್ಳೆ ಚಲನಚಿತ್ರಗಳನ್ನ ನಮ್ಮ ಭಾಷೆಯಲ್ಲಿ ರೀಮೇಕ್ ಮಾಡಿ ಪ್ರದರ್ಶಿಸಿಲ್ಲವೇ? ಹಾಗೆ ಮಾಡೋಣ, ಮತ್ತೆ ಡಬ್ಬಿಂಗ್ ಏಕೆ ಬೇಕು?
೪). ಇನ್ನೂ ಒಂದು ವಾದ ಅಂದರೆ ಬೇರೆ ಭಾಷೆಯ, ಬಹುಕೋಟಿ ವೆಚ್ಚದ ಸಿನೆಮಾಗಳನ್ನ ನಮ್ಮ ಭಾಷೆಯಲ್ಲಿ ನಿರ್ಮಾಣ ಮಾಡೋದು ಸಾಧ್ಯನೇ ಇಲ್ಲ, ಹಾಗಾಗಿ ಅದನ್ನ ಡಬ್ಬಿಂಗ್ ಮೂಲಕವಾದರೂ ನೋಡೋಣ, ಅಂತಾನ? ಇಲ್ಲಿ ಸ್ವಲ್ಪ ದೀರ್ಘ ಪ್ರತಿವಾದವನ್ನ ಮಂಡಿಸುತ್ತ ಇದ್ದೇನೆ. ಹೋದ ವರ್ಷ ಆಂಗ್ಲ ಭಾಷೆಯ ಒಂದು ಚಲನಚಿತ್ರ ಬಿಡುಗಡೆಯಾಗಿತ್ತು- 2012  ಅನ್ನೋ ಚಲನಚಿತ್ರ. ಎಲ್ಲರು ಅದನ್ನ ಹೊಗಳುತ್ತಾ ಇದ್ದ ರೀತಿ ನೋಡಿ ಬಹಳ ನಿರೀಕ್ಷೆಯಿಂದ ನೋಡಲು ಹೋದರೆ ಅಲ್ಲಿ ಅದರ ಹಿಂದಿ ಡಬ್ಬಿಂಗ್ ಪ್ರದರ್ಶನ ಇತ್ತು. ಸರಿ, ಬಂದಿದ್ದು ಆಯಿತು ನೋಡೋಣ ಅಂತ ಹೋದೆ. ಆದರೆ ಅಲ್ಲಿ ನಿರಾಸೆ ಆಯಿತು ಅನ್ನೋದು ಕಟು ಸತ್ಯ. ಚಿತ್ರ ಚೆನ್ನಾಗಿರಲಿಲ್ಲ ಅಂತಲ್ಲ. ಆದರೆ ಆ ತಾಂತ್ರಿಕತೆ ಹಾಗು ಭಾವನೆಗಳನ್ನ ಒಬ್ಬ ಅಂಗ್ಲ ನಟ ಹಿಂದಿಯಲ್ಲಿ ವ್ಯಕ್ತ ಪಡಿಸುತ್ತಾ ಇದ್ದಾಗ ಹಾಸ್ಯಾಸ್ಪದ ಅನ್ನಿಸುತಿತ್ತು.  ಕೆಲವೊಮ್ಮೆ ಟಿ.ವಿ ಯಲ್ಲಿ ಬರುವ ಕಾರ್ಯಕ್ರಮದಲ್ಲಿ ಸ್ವಲ್ಪ ಏರುಪೇರಾಗಿ, ಶ್ರವಣಕ್ಕೂ ದೃಶ್ಯಕ್ಕೂ ಹೊಂದಾಣಿಕೆ ತಪ್ಪಿದಲ್ಲಿ ನೋಡುವ ನಮಗೆ (ನನಗಂತೂ) ಏನೋ ಆಭಾಸ ಅಥವಾ ಸಿಡುಕ ಉಂಟಾಗುತ್ತೆ ಹಾಗು ಆ ಕಾರ್ಯಕ್ರಮದ ಸವಿಯೇ ಹಾಳಾಗುತ್ತೆ. ಹೀಗಿರುವಾಗ ಆಂಗ್ಲ ನಟ ನಮ್ಮ ಭಾಷೆಯಲ್ಲಿ ಮಾತಾಡೋದನ್ನ ಊಹಿಸೋಕಗುತ್ತ? ಅದು ಚಲನಚಿತ್ರದ ಜೀವ ಸೆಲೆಯನ್ನೇ ಕಿತ್ತು ಎಸೆದಂತಾಗುವುದಿಲ್ಲವ? ಅಲ್ಲಿ ಹಾಸ್ಯ ಹೋಗಿ ಹಾಸ್ಯಾಸ್ಪದ ರಾರಾಜಿಸುತ್ತೆ. ಹಾಗಾಗಿ ಅಂತ ಉತ್ತಮ ಚಿತ್ರಗಳನ್ನ ಹಾಳು ಮಾಡೋ ಬದಲು ಅದರ ಮೂಲತನವನ್ನ ಗೌರವಿಸೋದು ಉತ್ತಮ ಅಲ್ಲವೇ?
೫).ಮಲಯಾಳಂ ಚಿತ್ರವನ್ನ ಕನ್ನಡದಲ್ಲಿ ಡಬ್ ಮಾಡಲಾಗಿದೆ ಅಂತಿಟ್ಟುಕೊಳ್ಳೋಣ, ಅದರಲ್ಲಿ ಅವರು ಆಚರಿಸುವ ಓಣಂ ಹಬ್ಬದ ದೃಶ್ಯ ನಮಗೆ ಏನು ಭಾವನೆಯನ್ನೇ ಉಕ್ಕಿಸೋದಿಲ್ಲ, ಬದಲಾಗಿ ಅದನ್ನೇ ಕನ್ನಡ ಭಾಷೆಯಲ್ಲಿ ಮತ್ತೆ ಚಿತ್ರೀಕರಿಸಿ ಆ ಹಬ್ಬದ ಬದಲಾಗಿ ನಮ್ಮ ಸೊಗಡಿನ ಮಾರಮ್ಮನ ಹಬ್ಬ ತೋರಿಸಿದರೆ ಅದರ ಮಜವೇ ಬೇರೆ ಇರತ್ತೆ. ನಿಮ್ಮ ಮನಸ್ಸಾಕ್ಷಿಯನ್ನ ಕೇಳಿ ಹೇಳಿ- ಹೌದೋ / ಇಲ್ಲವೋ?
೬).ಅದು ಅಲ್ಲದೆ ಇತ್ತೆಚಿನ ದಿನಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮದವರು ಚಲನಚಿತ್ರ ರಂಗಕ್ಕೆ ಇಳಿದು ಅರ್ಧ ಅಧ್ವಾನ ಮಾಡಿದ್ದಾರೆ, ಅಲ್ಲದೆ ಈಗ ಡಬ್ಬಿಂಗ್ ಗೆ ಅವಕಾಶ ಕೊಟ್ಟರೆ ಬರಿ ಅದನ್ನೇ ಮಾಡಿ ನಮ್ಮ ಚಲನಚಿತ್ರಗಳೇ ಇಲ್ಲದಂತಾಗುವುದು ಬೇಕಾ? ಅದಕ್ಕೆ ನೀವು ಸಮಜಾಯಿಷಿ ಹೇಳಬಹುದು, ಗಟ್ಟಿ ಚಲನಚಿತ್ರಗಳು ಉಳಿದೆ ಉಳಿದುಕೊಳ್ಳುತ್ತವೆ ಇಲ್ಲದವು ಇದ್ದರು ಇರದಿದ್ದಂತೆ ಅಂತ. ಇದಕ್ಕೆ ಸ್ವಲ್ಪ ಬೇರೆ ವ್ಯಾಖ್ಯಾನ ನೀಡುತ್ತ, ಅಲ್ಲ ರೀ, ಮನೆಯಲ್ಲಿ ಕೂತು ಊಟ ಮಾಡೋ ಪದ್ಧತಿ ಈಗ ಬಹಳನೇ ಕಡಿಮೆ ಆಗಿದೆ, ಅದಕ್ಕೆ ಕಾರಣ ಇದಿನ ಫಾಸ್ಟ್ ಫುಡ್ ಗಳು. ಈ ಫಾಸ್ಟ್ ಫುಡ್ ಗಳು ಮೊದಲಿಗೆ ತಲೆ ಎತ್ತಿದಾಗ ಕೆಲವರು ಆತಂಕ ವ್ಯಕ್ತ ಪಡಿಸಿದ್ದು ಉಂಟು. ಆದರೆ ವಿಪರ್ಯಾಸ ಅಂದ್ರೆ ಈಗ ಈ ಫಾಸ್ಟ್ ಫುಡ್ ನಮ್ಮ ದೈನಂದಿನ ಬದುಕಾಗಿದೆ. ಅದು ತಪ್ಪು ಅಂತ ಯಾರಿಗೂ ಈಗ ಅನ್ನಿಸದೆ ಇರಬಹುದು, ಆದರೆ ಇಡಿ ಮನೆಯವರೆಲ್ಲ ಕೂತು ಊಟ ಮಾಡಿದ್ದ ಅನುಭವ ಇದ್ದವರಿಗೆ ಹಾಗು ಇನ್ನೂ ಅದನ್ನ ಪಾಲಿಸಿಕೊಂಡು ಬರುತ್ತಿರುವವರಿಗೆ ಎಲ್ಲೋ ಒಂದು ರೀತಿಯ ನೋವು ಕಾಡುತ್ತಾ ಇರೋದಂತೂ ನಿಜ. ಹಾಗೇನೆ ಇಂದು  ಡಬ್ಬಿಂಗ್ ಚಿತ್ರಗಳು ಮಾಡಲು ಬಿಟ್ಟರೆ ಮುಂದೊಂದು ದಿನ ಇದೆ ರೀತಿ ನಮಗೆ ಅನ್ನಿಸಿದರೆ ( ಯಾಕಂದ್ರೆ ನೈಜ ಕನ್ನಡ ಚಲನಚಿತ್ರಗಳನ್ನ ಅನುಭವಿಸಿರೋ ಕೊನೆಯ ಕೊಂಡಿ ನಾವುಗಳೇ ಆಗಿರುತ್ತೇವೆ) ಅದು ಆಶ್ಚರ್ಯವೇನಲ್ಲ.
ಆದರೆ ಇಲ್ಲಿ ನನ್ನನ್ನ ನಿಜವಾಗಲು ಕಾಡುತ್ತ ಇರೋ ವಿಷಯ ಏನು ಅಂದರೆ, ಈ ಡಬ್ಬಿಂಗ್ ಬೇಕು ಅನ್ನೋ ಮಂದಿಯಲ್ಲಿ ,ಕನ್ನಡ ಅಂದರೆ ಏನು ಮಾಡೋಕು ಸಿದ್ದ ಅನ್ನೋ ಹಲವಾರು ಸ್ನೇಹಿತರೆ ಇರೋದು. ಎಲ್ಲೆಲು ಕನ್ನಡ ರಾರಜಿಸಬೇಕು ಅನ್ನೋದು ನಿಜ, ಆದರೆ ಅದು ನಮ್ಮ ಬುಡವನ್ನ ಕೊಚ್ಚಿ ಅದರ ಮೇಲೆ ನಮ್ಮದಲ್ಲದ ಕನ್ನಡದ ಸೊಬಗನ್ನ ತೋರಿಸೋದಾದರೆ ಅದು ನಮಗೆ ಬೇಕಾ?
ಕನ್ನಡದ ಪ್ರೇಕ್ಷಕನಾಗಿ ನಾನು ಡಬ್ಬಿಂಗ್ ವಿರೋಧಿಸುತ್ತೇನೆ!!!

Monday, March 14, 2011

ಬೆಳೆಸೋದಾ? ಬೆಳೆಯಲು ಬಿಡೋದಾ?

ಈಗ ಎಲ್ಲಿ ನೋಡಿದರೂನು "ಕ್ರಿಕೆಟ್ ಜ್ವರ". ನಮ್ಮ ಹಳ್ಳಿಯ ಪುಟ್ಟ ಹುಡುಗನಿಂದ ಹಿಡಿದು ಜಾತ್ರೆಯಲ್ಲಿ ದನ ಕೊಳ್ಳೋ ಹಾಗೆ ಕ್ರಿಕೆಟಿಗರನ್ನ ಕೊಂಡುಕೊಂಡಿರುವ ಮಲ್ಲ್ಯ ಸಾಹೇಬರ ಬಳಗದಂತಿರೋ ವ್ಯವಹಾರಸ್ತರ, ಇಷ್ಟು ದಿನ ಕಾಲಿ ಕೂತಿದ್ದ ಬುಕ್ಕಿಗಳ, ಪ್ರಸಾರ ಮಾಡೋಕೆ ಒಂದೂವರೆ ತಿಂಗಳಿನ ತನಕ ಸುದ್ದಿ ಸಿಕ್ಕಿದೆ ಅಂತ ಹಿರಿ ಹಿರಿ ಹಿಗ್ಗುತ್ತಾ ಇರೋ ಮಾಧ್ಯಮಗಳ, ತಮ್ಮ ಹೊಸ ಪ್ರಿಯಕರ/ಪ್ರೇಯಸಿಯೊಡನೆ "ಜಸ್ಟ್ ಫ್ರೆಂಡ್ಸ್" ಅಂತಾನೆ ಎಲ್ಲ ಕ್ರಿಕೆಟ್ ಮೈದಾನಗಳಲ್ಲೂ ಕಾಣಿಸಿಕೊಳ್ಳೋ ನಾಯಕ ನಾಯಕಿಯರುಗಳ, ಮಾಡೋಕೆ ಜನ್ಮಕ್ಕೆ ಆಗೋ ಅಷ್ಟು ಕೆಲಸ ಇದ್ದರೂ ಕೇವಲ ಒಂದು ಪಂದ್ಯದ ಟಿಕೆಟ್ ಸಿಗಲಿಲ್ಲ ಅನ್ನೋ ವಿಷಯ ವಿಧಾನ ಮಂಡಲದಲ್ಲಿ ಚರ್ಚೆ ಮಾಡಬೇಕು ಅಂತ ಗುಟುರು ಹಾಕೋ ನಾಲಾಯಕ್ ರಾಜಕಾರಣಿಗಳ.... 
ಹೀಗೆ ಹೇಳ್ತಾ ಹೋದ್ರೆ ಎಲ್ಲರನ್ನೂ ಸೇರಿಸ್ಕೊಂಡು ಹೇಳಬೇಕಾಗುತ್ತೆ. ಹಾಗಾಗಿ ಇಂತಿಪ್ಪ ಎಲ್ಲರ ಮೈಮನಗಳಲ್ಲಿ ಈಗ ಸುಳಿದಾಡುತ್ತ ಇರೋ ಒಂದೇ ಪ್ರಮುಖ ವಿಷಯ ಅಂದರೆ-"ಕ್ರಿಕೆಟ್".  ಸೋಜಿಗ ಅಂದರೆ, ಇವರುಗಳಲ್ಲಿ ಕನಿಷ್ಠ 80 % ಜನಕ್ಕೆ ಈ ಆಟದ ಬಗ್ಗೆ ಗಂಧಾನೆ ಇರೋಲ್ಲ. ಆದ್ರೂನು 'ಪಾಯಸ ಕೊಟ್ಟೋರ ಕಡೆಗೆ ಪಂಚಾಯತಿ ಮಾಡಿದ' ಅನ್ನೋ ಹಾಗೆ ತೋಚಿದ್ದು-ತೋಚದೆ ಇರೋದು ಎಲ್ಲಾನೂ ಮಾತಾಡ್ಕೊಂಡು ತಮಗೂ ಕ್ರಿಕೆಟ್ ಬಗ್ಗೆ ಏನೂ ಗೊತ್ತಿಲ್ಲ ಅನ್ನೋದನ್ನ ಜಗಜ್ಜಾಯಿರ ಮಾಡ್ಕೊಳ್ಳೋ ಮೂರ್ಖ ಶಿಖಾಮಣಿಗಳೇ ಹೆಚ್ಚು.
ಹೋಗ್ಲಿ ಬಿಡಿ, ನಮ್ಮ ದೇಶದ ಜನಕ್ಕೆ ಮಕ್ಕಳನ್ನ ಮಾಡೋ ವೃತ್ತಿಯಿಂದ ಸ್ವಲ್ಪ ಸಮಯ ವಿರಾಮ ಕೊಡೋದ್ರಲ್ಲಾದ್ರು ಈ ಕ್ರಿಕೆಟ್ ಸ್ವಲ್ಪ ಮಟ್ಟಿಗೆ ಯಶ ಕಂಡಿದೆ ಅಂತಲೇ ಭಾವಿಸಿಕೊಂಡು, ನಮ್ಮ ವಿಷಯಕ್ಕೆ ಬರೋಣ. 
ಹೌದು, ನಮ್ಮಲ್ಲಿ ಎಷ್ಟು ಜನಕ್ಕೆ ನಾನು ಈ ಕೆಳಗೆ ಪಟ್ಟಿ ಮಾಡೋ ಆಟಗಳ ಬಗ್ಗೆ ತಿಳಿದಿದೆ? " ಕುಂಟಾಬಿಲ್ಲೆ"- "ಚಿನ್ನಿ ದಾಂಡು"- "ಮರ ಕೋತಿ"- "ಲಗೋರಿ"- " ಟಿಕ್ಕಿ"- "ಎಂಟು ಮನೆ/ ಹದಿನಾರು ಮನೆ ಆಟ"- "ಗೋಲಿ"- "ಚಿಣಿಮಿಣಿ"- "ಉಪ್ಪು ಕೊಡೆ ಸಾಕಮ್ಮ" ???? ಹೇಳ್ತಾ ಹೋದ್ರೆ ಮುಗಿಯಲಾರದಷ್ಟು ದೊಡ್ಡ ಪಟ್ಟಿ ಇದೆ, ಅಲ್ಲದೆ ಇವು ಕೇವಲ ನನ್ನ ನೆನಪಿನಲ್ಲಿ ಇರೋ-ಅಥವಾ ನಾನು ಕೇಳಿರೋ ನಮ್ಮ ಹಳ್ಳಿ ಆಟಗಳು. ನಾನು ಕೇಳದೆ/ಆಡದೆ ಇರೋ ಸಾಕಷ್ಟು ನಮ್ಮ ಮಣ್ಣಿನ ಸೊಗಡಿನ ಆಟಗಳು ಅವೆಷ್ಟಿದೆಯೋ ನಾ ಕಾಣೆ. 
ಹುಟ್ಟೋ ಮಗು ಇನ್ನ ಅಂಬೆಗಾಲು ಇಡೋಕೆ ಶುರು ಮಾಡಿದ್ದೆ ತಡ ನಾವುಗಳು ಅದಕ್ಕೆ ಆಗ್ಲೇ ಕ್ರಿಕೆಟ್ ಬ್ಯಾಟ್, ಹಾರೋ ಹೆಲಿಕಾಪ್ತೆರ್ ತಂದು ಕೊಟ್ಟಿರ್ತಿವಿ. ಆದ್ರೆ ಈ ಮೇಲೆ ತಿಳಿಸಿದ ಆಟಗಳ ಬಗ್ಗೆ ಹೇಳಿಕೊಡೋದು ಇರಲಿ, ನಮ್ಮ ಹಳ್ಳಿ ಕಡೆನೇ ಅವರನ್ನ ಕಳಿಸೋಲ್ಲ ಅಲ್ಲವ? ಹಿಂದಿನ ಕಾಲದಲ್ಲಿ ಬೇಸಿಗೆ ರಜ ಬಂತು ಅಂದ್ರೆ, ಹಳ್ಳಿಲಿ ಇರೋ ಅಜ್ಜಿ ಮನೆಗೆ ಓಡಿ ಹೋಗೋ ಮಕ್ಕಳು ಎಲ್ಲಿ, ಈಗಿನ ಕಾಲದಲ್ಲಿ ಬೇಸಿಗೆ ರಜ ಬಂತು ಅಂದ್ರೆ ಡಾನ್ಸ್/ಸಿಂಗಿಂಗ್/ಕರಾಟೆ/ಡ್ರಾಯಿಂಗ್ ಕ್ಲಾಸಸ್ ಅಂತ ಸ್ಟೇಟಸ್ ತೋರ್ಪಡಿಸೋ ಹುಚ್ಚು ಆಡಂಬರಗಳು ಎಲ್ಲಿ?
ಅಲ್ಲದೆ ಮೇಲೆ ಹೇಳಿದ ಆಟಗಳು ಖರ್ಚನ್ನ ಕೂಡ ಬಯಸೋಲ್ಲ. "ಕುಂಟಾಬಿಲ್ಲೆ" ಆಡೋಕೆ ಚೆನ್ನಾಗಿ ಸವೆದಿರುವ ಕಲ್ಲಿಂದ ಸ್ವತಹ ಮಾಡಿದ ಒಂದು 'ಬಿಲ್ಲೆ' - ಅಂಗಳದಲ್ಲಿ ಒಂದಷ್ಟು ಜಾಗ ಇದ್ರೆ ಸಾಕು. ದಿನ ಪೂರ್ತಿ ಹೊತ್ತೇ ಹೋಗಿದ್ದು ತಿಳಿಯೋಲ್ಲ. ಇನ್ನ "ಟಿಕ್ಕಿ''ಗೆ ಉಪಯೋಗಿಸಿ ಬಿಸಾಡಿದ ಬೆಂಕಿ ಪೊಟ್ಟಣದ ಕವರ್ ಸಾಕು. ಒಂದು ಪೊಟ್ಟಣದಿಂದ ಎರಡು ಟಿಕ್ಕಿ ಸಿಕ್ಕಂಗಾಯ್ತು. ಹೀಗೆ 4 ಜನ ಹುಡುಗರು ಸೇರಿಕೊಂಡು ಆ ಟಿಕ್ಕಿಗಳ  ರಾಶಿಯನ್ನ, ಮಣ್ಣಿನಿಂದ ಮಾಡಿದ ಗುಡ್ಡೆ ಮೇಲೆ ನಿಲ್ಲಿಸಿ, ನಿಗದಿತ ದೂರದಿಂದ ಮತ್ತದೇ "ಬಚ್ಚ"( ಕಲ್ಲನ್ನ ಸವೆದು ಮಾಡಿಕೊಳ್ಳೋ ಒಂದು ಸಣ್ಣ ಬಿಲ್ಲೆ) ದಿಂದ ಬೀಸಿ ಹೊಡೆದರೆ, ಆ ಮಣ್ಣು ಗುಡ್ಡೆಯಿಂದ ಹಾರಿ ಹೊರ ಬೀಳೋ ಟಿಕ್ಕಿಗಳಿಗೆಲ್ಲ ಗುರಿ ಇಟ್ಟವನೆ ರಾಜ. ಆ ಬೆಲೆಯಿಲ್ಲದ ಟಿಕ್ಕಿಗಳನ್ನ ಗೆಲ್ಲೋದರಲ್ಲಿ ಇದ್ದ ಮಜವನ್ನ ಇವತ್ತಿನ ಯಾವುದೇ ಜೂಜಾಟಾನೂ ಕೂಡ ನಿಮಗೆ ಕೊಡೊದು ಸಾಧ್ಯಾನೆ ಇಲ್ಲ. ಈಗಿನ ದಿನದಲ್ಲಿ ಮಗು ಏನಾದ್ರು ಸ್ಕೂಲಲ್ಲಿ ಬಿದ್ದು ಗಾಯ ಮಾಡ್ಕೊಂಡ್ರೆ ಪ್ರಿನ್ಸಿಪಾಲ್ ಮೇಲೆ ಕೇಸ್ ಹಾಕೋ ಪೋಷಕರು, ನಾವುಗಳು ''ಮರ ಕೋತಿ" ಆಡೋವಾಗ ಬಿದ್ದದ್ದನೆಲ್ಲ ಲೆಕ್ಕ ಹಾಕೊಕು ಸುಸ್ತು ಹೊಡಿತಿದ್ರೆನೋ?
ತಮ್ಮ ಮಕ್ಕಳಿಗೆ ಇಂತ ಆಟ ಆಡಿ, ಇಂತದನ್ನ ಆಡಬೇಡಿ ಅಂತ ಹೇಳೋ ಅಧಿಕಾರ- ಹಕ್ಕು ಎಲ್ಲ ತಂದೆ ತಾಯಂದಿರಿಗುನು ಇದೆ, ಒಪ್ಕೊಳ್ಳೋಣ. ಆದ್ರೆ ಮಕ್ಕಳಿಗೆ ಆ ರೀತಿ ನಿರ್ಬಂಧ ಹಾಕೋವಾಗ ತಾವು ಸರಿ ಇದೇವೆ ಅನ್ನೋದು ಎಷ್ಟು ಮಂದಿಗೆ  ಗೊತ್ತಿರತ್ತೆ? ಹಾಗಂತ ನಮ್ಮ ಮಕ್ಕಳಿಗೆ ಮೇಲೆ ಹೇಳಿದ ಆಟಗಳನ್ನೇ ಆಡಿಸಿ ಅಂತ ಅಲ್ಲ. ಮಕ್ಕಳನ್ನ ಮಕ್ಕಳಾಗಿ ಇರೋಕೆ ಬಿಡಿ. 
ಸೂಕ್ಷ್ಮವಾಗಿ ಗಮನಿಸಿ ನೋಡಿದ್ರೆ, ಹಿಂದಿನ ಕಾಲದಲ್ಲಿ ಆಡ್ತಾ ಇದ್ದ ಆಟಗಳು ಕೇವಲ ಆಟಗಳಾಗಿರಲಿಲ್ಲ. ಅವು ಪ್ರಕೃತಿದತ್ತ ಪಾಠಗಳಾಗಿದ್ದವು. "ಕುಂಟಾಬಿಲ್ಲೆ"ಯ ಆಟ ಕುಂಟಿಕೊಂಡು ಆಡಬೇಕು. ಅದು ಕುಂಟಿದರುನು ಗುರಿ ಮುಟ್ಟು ಅನ್ನೋ ಸಂದೇಶ ಕಲಿಸಿದರೆ, "ಟಿಕ್ಕಿ" ಸಣ್ಣ ಪೊಟ್ಟಣ ಕೂಡ ಸಂತೋಷವನ್ನ ಕೊಡಬಲ್ಲದು ಅನ್ನೋದನ್ನ ಸೂಚಿಸುತ್ತಿತ್ತು. "ಮರಕೋತಿ" ಆಟ ಹಸಿರಿನೊಂದಿಗೆ ಬೇರೆಯೋ ಪರಿಪಾಟ ಬೆಳೆಸಿದರೆ, "ಹದಿನಾರು ಮನೆ, ಎಂಟು ಮನೆ ಆಟ" ಬುದ್ದಿಯ ತೀಕ್ಷ್ಣತೆ ಮತ್ತು ಸಂಧರ್ಬ್ಹೊಚಿತ ನಡೆಯನ್ನ ಕಲಿಸಿಕೊಡುತಿತ್ತು. ಈಗ ನೀವೇ ಹೇಳಿ, ಯಾವ ಜಾನಿ ಸಕ್ಕರೆ ತಿಂದ ಅನ್ನೋದು ತಿಳಿಯೋದು ಮುಖ್ಯಾನೋ ಅಥವಾ ನಿಮ್ಮ ಮಗು ಸಕ್ಕರೆಗು-ಉಪ್ಪಿಗೂ ವ್ಯತ್ಯಾಸ ತಿಳಿಯೋ ಬುದ್ದಿಮಟ್ಟ ಬೆಳೆಸಿಕೊಳ್ಳೋದು  ಮುಖ್ಯಾನೋ?
ಆದ್ದರಿಂದ, ಬೇಸಿಗೆ ರಜೆ ಓಡಿ ಬರ್ತಾ ಇದೆ. ನಿಮ್ಮ ಮಕ್ಕಳನ್ನ ಮನೆಯೋಳಗೋ, ಇಲ್ಲ ಮನೆಪಾಠಗಳಿಗೋ ದೂಡಿ ಅವರುಗಳನ್ನ ಗಿಳಿಗಳನ್ನಾಗಿ  ಮಾಡಬೇಡಿ. ಸ್ವಚ್ಚಂದವಾಗಿ ತಮಗೆ ಇಷ್ಟ ಬಂದಿದ್ದನ್ನ ಮಾಡೋಕೆ ಬಿಡಿ. ಮಕ್ಕಳನ್ನ ಅವ್ರಿಗೆ ಇಷ್ಟ ಆಗೋ ಹಾಗೆ ಬೆಳೆಸಿ. ನಮ್ಮ ಇಷ್ಟಕ್ಕೆ ತಕ್ಕಂತೆ ಅಲ್ಲ. ವರ್ಲ್ಡ್ ಕಪ್, ಐ.ಪಿ.ಎಲ್. ಇವೆಲ್ಲೇ ಇದ್ದೆ ಇರ್ತವೆ. ಸಿನಿಮಾಗಳು ಬರ್ತಾನೆ ಇರ್ತವೆ. ಅವುಗಳಿಗೆಲ್ಲ ರಜೆ ಹಾಕಿ, ರಜೆಯ ನಿಜವಾದ ಸವಿಯನ್ನ ಸವಿಯಿರಿ. ಪ್ರಕೃತಿಗಿಂತ ದೊಡ್ದವರಿಲ್ಲ. ಪ್ರಕೃತಿಯ ವಿರುದ್ದವಾಗಿ ಬದುಕೋದು ಬೇಡ. ನಮ್ಮ ಮಕ್ಕಳನ್ನ ಕೂಡ ಹಾಗೆ ಬೆಳೆಸೋದು ಬೇಡ!  ಬೆಳೆಸೋದಾ? ಬೆಳೆಯಲು ಬಿಡೋದಾ? ಅನ್ನೋ ಜಿಜ್ಞಾಸೆ ಬೇಡ. ಬೆಳಯಲು ಬಿಡಿ.

Thursday, January 20, 2011

ಇದೇನಾ ಸಭ್ಯತೆ? ಇದೇನಾ ಸಂಸ್ಕೃತಿ?

ಹೊಸ ವರ್ಷನ ತುಂಬು ಹೃದಯದಿಂದ ಸ್ವಾಗತಿಸಿದ್ದಾಯ್ತು, ಸಂಕ್ರಮಣದ ಎಳ್ಳು-ಬೆಲ್ಲಾನು ಸವಿದದ್ದಾಯ್ತು. ಎಳ್ಳು-ಬೆಲ್ಲ ತಿಂದು ಒಳ್ಳೆ ಮಾತಾಡು ಅನ್ನೋದು ವಾಡಿಕೆ. ಆದ್ರೆ ಈ ವರ್ಷದ ಮೊದಲ ಬ್ಲಾಗನ್ನ ಸ್ವಲ್ಪ ಖಾರದ ಹಾಗು ಅಷ್ಟೇ ನೋವಿನ ವಿಷಯದೊಂದಿಗೆ ಶುರು ಮಾಡ್ಬೇಕಾಗಿಬಂದಿದೆ. 
ನನ್ನ ಕಳೆದ ಕೆಲವು ಬ್ಲಾಗಗಳಲ್ಲಿ ನಮ್ಮ ವೃತ್ತಿಯ ಸುಂದರ ಮುಖದ ಬಗ್ಗೆ ಪರಿಚಯ ಮಾಡಿಕೊಟ್ಟಿದ್ದೆ. ಆದ್ರೆ ಅದರ ಇನ್ನೊಂದು ಬದಿಯಲ್ಲಿ ಇರೋ ನೋವು, ಹತಾಶೆಯ ಮುಖ ಹೊರಗಿನ ಪ್ರಪಂಚಕ್ಕೆ ಕಾಣೋದೆ ಇಲ್ಲ. ಯಾಕಂದ್ರೆ ಎಲ್ಲ ವಿಷಯಗಳನ್ನ ನಾಟಕೀಯವಾಗಿ ಬಣ್ಣಿಸೋ ಹಾಗು ಅದೇ ರೀತಿಯಲ್ಲಿ ಸ್ವೀಕರಿಸೋ ದೃಷ್ಟಿಕೋನ ನಮ್ಮ ಜನಗಳದ್ದು. ಯಾವುದೇ ಸಿನಿಮಾದಲ್ಲಿ ನೋಡಿದರೂನು ಡಾಕ್ಟರ್ ಅಂದ್ರೆ ಒಂದು ಮೆಕ್ಯಾನಿಕಲ್ ಯಂತ್ರ ಅನ್ನೋ ಹಾಗೆ ಪಾತ್ರ ಸೃಷ್ಟಿ ಮಾಡಿರ್ತಾರೆ. ರೋಗಿಯ ನಾಡಿ ನೋಡು, ಜೀವ ಇದೆಯೋ ಇಲ್ವೋ ಹೇಳು- ಆಪರೇಷನ್ ಗೆ ದುಡ್ಡು ಕೀಳೋ ರಾಕ್ಷಸರು ಅಂತ ತೋರಿಸು, ಇತ್ಯಾದಿ. ಇವರದು ಹೀಗಾದ್ರೆ  ಇನ್ನ ಟಿ.ವಿ ಮಧ್ಯಮವಂತೂ ಒಂದು ಹೆಜ್ಜೆ ಮುಂದೆ ಹೋಗಿ ಪರಿಸ್ತಿತಿಯ ತಳ ಬುಡ ವಿಚಾರಿಸದೆ ಪ್ರಸಾರ ಮಾಡೋ ಒಂದೇ ಸುದ್ದಿ ಅಂದ್ರೆ-"ವೈದ್ಯರ ನಿರ್ಲಕ್ಷದಿಂದ ರೋಗಿ ಸಾವು, ಆಸ್ಪತ್ರೆ ಧ್ವಂಸ". ಅಲ್ಲದೆ ಆ ಕ್ಯಾಮರಾಮನ್ ಮಹಾಶಯ ಕಲ್ಲು ಹೊಡಿಯೋದನ್ನ ಅಥವಾ ಡಾಕ್ಟರ್ ಮೇಲೆ ಹಲ್ಲೆ ಮಾಡ್ತಿರೋ ವೀಡಿಯೊನ ಸ್ಪಷ್ಟವಾಗಿ ತೆಗಿತಿರ್ತಾನೆ. ಸ್ತಿಮಿತ ಇರೋ ಯಾರೇ ಆದರೂ ಅಲ್ಲಿ ಆ ಸಮಯದಲ್ಲಿ ಕಲ್ಲು ಹೊಡಿಯೋರಿಗೆ ಬುದ್ದಿ ಹೇಳ್ತಾರೆ ಅಥವಾ ಏನೂ ಮಾಡಾಕೆ ಆಗದೆ ಇದ್ರೆ ತಮ್ಮ ಪಾಡಿಗೆ ತಾವು ಇರ್ತಾರೆ. ಆದರೆ ಅದು ಬಿಟ್ಟು ಆ ಸನ್ನಿವೇಶಾನ ಕೇವಲ ಮಜಾ ಅಂತ ಭಾವಿಸಿ ಚಿತ್ರೀಕರಿಸೋ ಇಂತ ಮನಸ್ಸಿನವರಿಗೆ ಏನ್ ಹೇಳೋಣ?
ಇಲ್ಲಿ ನಾನು ಹೇಳೋಕೆ ಹೊರಟಿರೋ ಪ್ರಮುಖ ವಿಷಯ ಅಂದ್ರೆ-
*** ಒಬ್ಬ ರೋಗಿ ಒಬ್ಬ ವೈದ್ಯನ ಬಳಿ ಬಂದಿದ್ದಾನೆ ಅಂದ ಮೇಲೆ ಅಲ್ಲಿಗೆ ಆ ವೈದ್ಯನ ಮೇಲೆ ನಂಬಿಕೆ ಇಟ್ಟೇ ಬಂದಿರ್ತಾನೆ. ಅಂದ ಮೇಲೆ ವೈದ್ಯರಾದ ನಮಗೆ ಇದರ ಅರಿವು, ಜವಾಬ್ದಾರಿ ಮತ್ತು ನಂಬಿಕೆ ಉಳಿಸಿಕೊಬೇಕು ಅನ್ನೋದು ತಿಳಿದಿರತ್ತೆ ಅಲ್ಲವಾ?ಪ್ರತಿಯೊಬ್ಬ ವೈದ್ಯ ಕೂಡಾ ಯಾವುದೇ ರೋಗಿಯನ್ನಾದರೂ ನೋಡೋದು ತನ್ನ ಕರ್ತವ್ಯ ಅಂತಾನೆ ಭಾವಿಸ್ತಾನೆ ಹಾಗು  ನಿಭಾಯಿಸ್ತಾನೆ. ಅನಿವಾರ್ಯ ಪರಿಸ್ತಿತಿಯಲ್ಲಿ ಕೆಲವೊಂದು ಸಲ ಕೈ ಮೀರಿ ರೋಗಿಯ ಪ್ರಾಣ ಹೋದರೆ ಅದಕ್ಕೆ ಯಾವಾಗಲೂ ವೈದ್ಯ ಹೇಗೆ ಕಾರಣ ಆಗ್ತಾನೇ? 
ಸಾಮಾನ್ಯವಾಗಿ ಕೇಳಿ ಬರೋ ಮಾತು ಅಂದರೆ ವೈದ್ಯನ ನಿರ್ಲಕ್ಷದಿಂದಲೇ ಸಾವಗಿದೆ ಅಂತ. ಒಂದು ನಿಮಿಷ ನೀವೇ ಯೋಚನೆ ಮಾಡಿ ಹಾಗು ನಿಮಗೆ ನೀವೇ ಉತ್ತರನ ಕಂಡುಕೊಳ್ಳಿ.- "ಯಾವತ್ತಾದ್ರು ಯಾರನ್ನಾದರು ನೋಡಿಕೊಳ್ಳೋಕೆ ಒಂದು ರಾತ್ರಿ ನಿದ್ದೆ ಕೆಟ್ಟಿದ್ದೀರಾ?" ನಿಮ್ಮ ತಂದೆ-ತಾಯಿ-ಹೆಂಡತಿ-ಮಕ್ಕಳನ್ನ ಬಿಟ್ಟು ಬೇರೆಯವರನ್ನ ನೋಡ್ಕೊಳ್ಳೋಕೆ,ಯಾಕಂದ್ರೆ ಅವರನ್ನ ನೋಡಿಕೊಳ್ಳೋದು ನಮ್ಮಗಳ ಕರ್ತವ್ಯ ಅಥವಾ ಇನ್ನ ಕೆಲವರು ಅದನ್ನ ಕರ್ಮ ಅಂತಾನು ಭಾವಿಸುತ್ತಾರೆ. 
ಹೀಗಿರೋವಾಗ ಒಬ್ಬ ವೈದ್ಯನಿಗೆ ರೋಗಿ ಯಾವುದೇ ರೀತಿಲಿ ಸಂಬಂಧಿ ಅಲ್ಲ, ಸ್ನೇಹಿತ ಆಗಿರೋವ್ನಲ್ಲ, ಜೀವನಕ್ಕೆ ದಾರಿ ಮಾಡಿಕೊಡೋನಲ್ಲ- ಹಾಗಿದ್ರೂ ಅವ್ನು ರಾತ್ರಿ ಎಷ್ಟೇ ಹೊತ್ತಿಗೆ ಬರಲಿ, ಏನೇ ತೊಂದರೆ ಅಂತ ಹೇಳಲಿ, ವೈದ್ಯರುಗಳು ನಿದ್ದೆ ಕೆಟ್ಟು  ವಿಚಾರಿಸುತ್ತರಲ್ಲವೇ? ಎಷ್ಟೋ ರೋಗಿಗಳಿಗೋಸ್ಕರ ನಮ್ಮ ಕುಟುಂಬದೊಂದಿಗಿನ ಕೆಲವು ಸಮಾರಂಭಗಳನ್ನೂ ಬಿಟ್ಟು ಬರುತ್ತೆವಲ್ಲವೇ? ಹಾಸ್ಯ ಅನಿಸಿದರೂನು ನಿಜ ಅಂದರೆ ಎಷ್ಟೋ ಸಲ ಹೆಂಡತಿ ಜೊತೆ ಬೆಚ್ಚಗೆ ಮಲಗಿದ್ರೂನು ಎದ್ದು ಬಂದಿರುತ್ತಾರೆ!!! ಕುಡಿದು ಮೋಜು ಮಾಡಿ ಬಿದ್ದು ಬರೋ ಸತ್(?)ಪ್ರಜೆಗಳನ್ನ ನೋಡೋಕೆ ಅರ್ಧ ಮಾಡಿರೋ ಊಟ ಬಿಟ್ಟು ಬರ್ತಿವಿ. ದೈನಂದಿನ ಉದಾಹರಣೆನೆ ತಗೊಳ್ಳಿ- ಎಷ್ಟು ಸಲ ನಿಮ್ಮ ಮಧ್ಯಾನದ ನಿದ್ದೆ ಮಧ್ಯ ಒಬ್ಬ ಸ್ನೇಹಿತ ಫೋನ್ ಮಾಡಿ ಊರಿಗೆ ಬಂದಿದ್ದೀನಿ, ಬಸ್ ಸ್ಟ್ಯಾಂಡ್ ನಲ್ಲಿದ್ದೀನಿ ಅಂದಾಗ ಸುಳ್ಳೇ ಊರಲ್ಲಿ ಇಲ್ಲ ಅಂತ ಹೇಳಿಲ್ಲ? ಯಾರಾದರು ವೈದ್ಯ ಹಾಗೆ ಮಾಡಿದರೆ ಹೇಗಿರತ್ತೆ ಅನ್ನೋ ಕಲ್ಪನೆನೆ ಭಯಂಕರ ಅಲ್ವಾ?
ಇಂತ ಸಂಧರ್ಭಗಳನ್ನ ಪ್ರತಿ ದಿನ ನಾವುಗಳು ಎದುರಿಸುತ್ತೇವೆ ಮತ್ತು ಯಾರಿಗೂ ಕೂಡ ಅದು ಗೋಳು ಅಂತಲೋ ಅಥವಾ ನೋಡಿ ನಮಗೆ ಎಷ್ಟು ಕಷ್ಟ ಇದೆ ಅಂತನೋ ಹೇಳಿಕೊಳ್ಳೋದಿಲ್ಲ. ಯಾಕಂದರೆ ನಮಗೆ ರೋಗಿಯೊಬ್ಬ ಗುಣವಾಗಿ ಹೋಗೋವಾಗ 'ನಗು' ಚೆಲ್ಲುತ್ತಾನಲ್ಲ, ಅದು ಎಲ್ಲ 'ನಗದಿ'ಗಿಂತ ಹೆಚ್ಚಿನ ಧನ್ಯ ಭಾವ ಕೊಡುತ್ತೆ. ಇಲ್ಲೆಲ್ಲೂ ಕೂಡ ಜನರಿಗೆ ವೈದ್ಯರ ಲಕ್ಷ ಕಾಣಿಸೋಲ್ಲ, ಆದ್ರೆ ರೋಗಿ ಸತ್ತಾಗ ಮಾತ್ರ ಅದು ಹೇಗೆ ನಿರ್ಲಕ್ಷದಿಂದಲೇ ಸತ್ತದ್ದು ಅನ್ನೋ ನಿರ್ಣಯಕ್ಕೆ ಬಂದುಬಿಡುತ್ತಾರೆ ಜನ?
ಅಲ್ಲಾರೀ, ಕಾಣದೇ ಇರೋ ದೇವರಿಗೆ ಎಡೆ ಇಡ್ತೀವಿ, ಅವ್ನು ಏನೂ ಕೊಡಲಿಲ್ಲ ಅಂದ್ರುನು ದಿನ ಕೈ ಮುಗಿತಿವಿ, ಅದೇ ಒಬ್ಬ ವೈದ್ಯ ನಿಮ್ಮನ್ನ ಪರೀಕ್ಷೆ ಮಾಡೋಕೆ ಐದು ನಿಮಿಷ ತಡ ಮಾಡಿದ್ರೆ ಹಲ್ಲೆ ಮಾಡೋ ಮಟ್ಟಕ್ಕೆ ಹೋಗ್ತಿರ. ಇದೇನಾ ಸಭ್ಯತೆ? ಇದೇನಾ ಸಂಸ್ಕೃತಿ?
ಇಷ್ಟೆಲ್ಲಾ ಯಾಕೆ ಹೇಳಬೇಕಾಗಿ ಬಂದಿದೆ ಅಂದ್ರೆ ಇವತ್ತಿನ ಪರಿಸ್ತಿತಿಯಲ್ಲಿ ಒಬ್ಬ ವೈದ್ಯ ರೋಗಿಯನ್ನ ನೋಡೋದಕ್ಕೆ ಹೆದರಬೇಕಾದ ವಾತಾವರಣ ಇದೆ. ನಮಗೆ ಗೌರವ ಕೊಡೊ ಮಾತು ಹಾಗಿರಲಿ, ನಮ್ಮ ಮೇಲೆ ಹಲ್ಲೆ ಮಾಡದೆ ಇದ್ರೆ ಸಾಕಪ್ಪ ಇವತ್ತು ಅಂತ ಪ್ರತಿದಿನ ಎದ್ದು ಬರೋ ಎಷ್ಟೋ ವೈದ್ಯರಿದ್ದಾರೆ. ಇದಕ್ಕೆಲ್ಲ ಕಾರಣ ಅಂದ್ರೆ ನಮ್ಮ ಮಾಧ್ಯಮಗಳ ಬೇಜವಾಬ್ದಾರಿತನ ಹಾಗು ನಮ್ಮ ಜನರ ಅನಕ್ಷರತೆ. ಒಬ್ಬ ರೋಗಿಯ ರೋಗದ ತೀವ್ರತೆಯನ್ನ ವೈದ್ಯ ಮೊದಲೇ ತಿಳಿಸಿ ಹೇಳಿದ್ದರೂ ಕೂಡ, ವೈದ್ಯರ ಬಳಿ ಬಂದ ಮೇಲೆ ರೋಗಿ ಗುಣ ಆಗಲೇಬೇಕು ಅನ್ನೋ ವಿಚಿತ್ರ ಮನೋಭಾವ ಇದೆ ಜನರಲ್ಲಿ. ಇದು ಬದಲಾಗಬೇಕು ಮತ್ತು ಸತ್ಯವನ್ನ ಒಪ್ಪಿಕೊಳ್ಳೋ ಎದೆಗಾರಿಕೆ ನಮ್ಮ ಜನಗಳಿಗೆ ಬರಬೇಕು. ಇದನ್ನ ಸಾಧ್ಯವಾಗಿಸೋದರಲ್ಲಿ ತುಂಬಾ ಜನರಿಗೆ ಸುಲಭವಾಗಿ ತಲುಪೋ ಸಾಧನವಾದ ಮಾಧ್ಯಮಗಳು ಮಾಡಬೇಕು. ಆದರೆ ಈ ಮಾಧ್ಯಮಗಳದ್ದು "ಬೇಲಿಯೇ ಎದ್ದು ಹೊಲ ಮೇಯುವ ಚಾಳಿ ". ಇದು ಬದಲಾಗಬೇಕು.
ಏನೇ ಆದರು ನಾವು ನಮ್ಮ ಕೆಲಸನ ಮುಂದಿವರಿಸಲೇ ಬೇಕು ಹಾಗು ಮುಂದುವರಿಸುತ್ತೇವೆ ಕೂಡ.
ಮತ್ತೊಮ್ಮೆ ಬೆಟಿಯಾಗೊವರೆಗೂ.....

Thursday, December 30, 2010

ಹೆಂಡತಿಯರೆಲ್ಲ ಹೀಗೇನಾ?


"ಕಾರ್ಯೇಷು ದಾಸಿ; ಕರನೇಶು ಮಂತ್ರಿ;
ರೂಪೇಚ ಲಕ್ಷ್ಮಿ; ಕ್ಷಮಯಾ ಧರಿತ್ರಿ;
ಭೋಜ್ಯೇಶು ಮಾತಾ; ಶಯನೇಶು ರಂಭಾ"
Am not sure how many among our generation have ever heard the above Sanskrit shloka. Well if you haven't heard it, never mind, its never late to make an effort in knowing the meaning of this shloka which describes WOMAN in her entirety.
As always my effort to remember the shloka at this juncture arose from the people I meet daily, who in all the aspects have become a never ending resource for exploring the hidden stories of human nature. Yes, they are my Patients, each of them being a novel of different emotions!
The story goes like this....
The other day, a young guy aged around 24 walked in to our OPD ( its urology and andrology OPD). He was clad in his middle classed attire, looking rather worried as if his problem is solution-less. Seating himself rather hurriedly on the examination chair, he placed some of his investigation reports on my table. So without any formal introduction I was already being forced by this young man to just concentrate on his problems rather than wasting time in talking to him. I controlled my emotions to scold him, coz now-a-days it has become so irritating that people want doctor to just prescribe them medicines as they themselves would have made some shabby diagnosis of their problem, and they will be prejudiced to such an extent that you say anything contrary to what they believe their problem is, thats it; you just lost a patient. He/she will already be walking out of the chamber in hunt of another doctor!
So going by his reports, the guy had fertility problems with him, result of which he was not able to beget any children. His preliminary reports suggested that he rather try to go for the newer artificial insemination techniques, which seemed to be out of his budget when I explained him the options. He was bent upon trying to sneak some way to overcome this problem of his which made my work of consoling him much harder.
Now, whats the twist in this, you may ask isn't it? Well, here it is. During the conversation the guy revealed that he is HIV positive ( in laymen words AIDS). Shocking! Not that we never see such guys, as day in and out we see people who are infected and it is yet another viral disease for us which has been wrongly publicised in a rather scary way. Shocked for the fact that the guy knowing that he is infected and also knowing that this disease will be transmitted by sexual act, is still willing to have a child of his own!!!
Let me make one point clear here. Every person desiring to have a baby is normal and so is this guy. Am not against his desire. But, my concern was, this guy not only is gonna die an early death, but also will intentionally transmit the disease to his wife and also his unborn child who both will meet an early death. In simple words, he is planning for two homicides just to fulfill his desire. Is this action acceptable?? Never, as far as me in concerned.
So this background of his made my work of counselling him much more gruelsome as he is never accepting my point at all. As a last resort I asked him if his wife had come with him to which he summoned her inside the room. She was a young lady in her 20s, recently married, and she was educated till pre-university college. Knowing this I thought my job might get easier once I convince this girl about the future consequences by the guy's intentions. So, not wanting to hurt her emotions I just said that if he has sexual contact with her, even she too will get the disease and if they have a child, then chances of the kid having the disease are also high. The girl 's reaction was an affirmative nod suggesting she knew it!!
So not wasting my time, I said directly that she might die early death just because of him. Guys, you wont believe me. The PU learned girl said- I know! I don't mind dying. I just want my husband's desire to be fulfilled. Gosh!! I couldn't believe what I was hearing. Is this a Karan Johar movie??!!
Speechlees for the next 5 minutes. Come'on now if you guys' were in my situation what would have you done? So, grabbing myself back to the scene, I said that he is never gonna have children because his medical condition meant he had just 0.005% chances of conceiving( which was fortunate though). Just advised him to adopt any child if he had such a strong will to raise a child and the guy finally borrowed my words when he felt that was the last option in front of him.
I was done with the guy, but what still keeps me haunting is the girl's words. I don't know who wrote the above shloka, but she was totally like that- accepting him as her husband in his sickness and also death!
My conscience keeps asking me- ಯಾಕೆ ಹೆಂಡತಿಯರೆಲ್ಲ ಹೀಗೆ!?.......

Monday, December 13, 2010

ಭಾರತೀಯರು ಹಲ್ಲಿ ಹಾಗು ಜಿರಳೆಗಳನ್ನ ಏಕೆ ತಿನ್ನುತ್ತಾರೆ?






ಭಾರತೀಯರು ಹಲ್ಲಿ ಹಾಗು ಜಿರಳೆಗಳನ್ನ ಏಕೆ ತಿನ್ನುತ್ತಾರೆ?
ಮೇಲಿನ ಪ್ರಶ್ನೆ ನೋಡಿ ಆಶ್ಚರ್ಯ ಆಯ್ತಾ? ಅರೆ, ಭಾರತೀಯರು ಯಾವಗಿಂದನಪ್ಪ ಇದನ್ನೆಲ್ಲಾ ತಿನ್ನೋಕೆ ಶುರು ಮಾಡಿದ್ರು ಅಂತ? ಇದನ್ನ ನನ್ನ ಹೆಂಡತಿ ನಂಗೆ ಕೇಳ್ದಾಗ ನಾನು ತಮಾಷೆಗೆ ಅಂತ ನಕ್ಕೆ. ಆದ್ರೆ ಇದು ನಾವುಗಳು ನಮ್ಮ ಮಕ್ಕಳನ್ನ ಓದಿಸೋ ಕಾಲ ಬಂದಾಗ ಅವರ ಟೆಕ್ಸ್ಟ್ ಬುಕ್ಕಿನಲ್ಲಿ ರೀತಿ ಪ್ರಶ್ನೆ ಕಾಣುವ ಸಾಧ್ಯತೆಗಳು 99%ಗಿಂತ ಜಾಸ್ತಿ ಇದೆ ಅಂತ ಹೇಳಿದಾಗ ಕುತೂಹಲ ಆಯ್ತು. ಹೇಗೆ ಅನ್ನೋ ಕುತೂಹಲ ನಿಮಗೂ ಇದೆಯಲ್ವಾ? ಅವಳು ಹೇಳಿದ ಸರಳ ಲಾಜಿಕ್ ಹೇಳ್ತೀನಿ ಕೇಳಿ.
ಗಾಂಧಿ ತಾತನ ಕಾಲದಿಂದಾನು ಭಾರತ ಹಳ್ಳಿಗಳಿರುವ ರಾಷ್ಟ್ರ ಅಂತಾನೆ ನಾವೆಲ್ಲಾ ಕಲಿತಿರೋದು ಹಾಗು ಅದು ಸತ್ಯ ಕೂಡ. ಯಾಕಂದ್ರೆ ತಲತಲಾಂತರದಿಂದಾನು ನಮ್ಮ ಪೂರ್ವಜರು ಹಳ್ಳಿಯಲ್ಲೇ ಇದ್ದುಕೊಂಡು ವ್ಯವಸಾಯವನ್ನೇ ಜೀವನ ಮಾಡಿಕೊಂಡವರು. ಹಾಗಾಗಿ ಉತ್ತಿ ಬಿತ್ತು ಬೆಳೆ ತೆಗೆಯೋರು ಮತ್ತು ಹೆಚ್ಚಾಗಿ ಅದೇ ಅವರ ದೈನಂದಿನ ಊಟ ಕೂಡ ಆಗಿರುತ್ತಿತ್ತು. ಸಹಜವಾಗಿ 90 ಕ್ಕೂ ಹೆಚ್ಚು ಜನ ಸಸ್ಯಹಾರಿಗಳಾಗಿದ್ದರು.
ಬೌಗೋಳಿಕವಾಗಿ ಜಗತ್ತಿನ ಏಳನೇ ದೊಡ್ಡ ರಾಷ್ಟ್ರವಾಗಿದ್ದು, ವ್ಯವಸಾಯವೇ ಅತಿ ಪ್ರಮುಖ ಆದಾಯವಾಗಿದ್ದು ಹಾಗು ಅಷ್ಟೊಂದು ಜನ ಸಸ್ಯಹಾರಿಗಳಿದ್ದು ತೀರ ಹಲ್ಲಿ ತಿನ್ನೋ ಮಟ್ಟಕ್ಕೆ ನಾವು ಇಳಿತೀವ? ವಿಪರ್ಯಸವಾದ್ರು ಇದು ಸತ್ಯ ಕಣ್ರೀ. ಜಾಸ್ತಿ ತಲೆ ಉಪಯೋಗಿಸೋದೆನು ಬೇಡ, ಯಾಕೆಂದ್ರೆ ಉತ್ತರ ನಮ್ಮ ಕಣ್ಣು ಮುಂದೆ ಬಿದ್ದು ಹೊರಳಾಡ್ತಾ ಇದೆ. ನೀವೇ ಯೋಚನೆ ಮಾಡಿ, ಸಸ್ಯಹಾರಿಗಳಾಗೆ ಉಳಿಬೇಕೂಂದ್ರೆ ಸಸ್ಯಗಳನ್ನ ಬೆಳಿಬೇಕು, ಹೌದ? ಸಸ್ಯಗಳನ್ನ ಬೆಳೆಬೇಕು ಅಂದ್ರೆ ಭೂಮಿ ಬೇಕು, ಹೌದ?
ಮತ್ತೆ, ಇಂಚು ಭೂಮಿನೂ ಬಿಡದಂಗೆ ಕಬಳಿಸ್ತ ಇರೋ ನಾಯಕರನ್ನ ನೋಡಿಕಂಡು ಸುಮ್ನಿದಿವಿ. ಅದು ಹಾಳಾಗಿ ಹೋಗ್ಲಿ, ನಾವಾದರು ನೆಟ್ಟಗಿದ್ದೀವ ಅಂದ್ರೆ ನಾವುಗಳೇ ಅಂಥವರು. ಯಾಕೆ ಹೇಳಿ, ಗಂಡ-ಹೆಂಡ್ತಿ ಇಬ್ಬರು ದುಡಿದು ಬೆಂಗಳೂರಲ್ಲಿ ಒಂದು ಸೈಟು ಮಾಡೋ ತನಕ ನೆಮ್ಮದಿ ನಿದ್ದೆ ಎರಡು ಇಲ್ಲ ನಮ್ಮಗಳಿಗೆ. ಹೆಚ್ಚಾಗ್ತಾ ಇರೋ ಮಳಿಗೆಗಳು, ರಸ್ತೆ ಹೆಸರು NICE ಆದ್ರೂನು ಟೋಲ್ ಫೀನಲ್ಲಿ ಇಲ್ಲದ ನೈಸು, ಫ್ಲೈ ಓವರ್ ಮೇಲೆ ಫ್ಲೈ ಓವರ್ ಇದ್ದ್ರುನು ಜಾಗ ಸಾಲದೇ ಇರೋ ವಾಹನಗಳು, ಭೂಮಿ ಇದ್ದರೂನು ಮಾಲಿನ್ಯದಿಂದ ಬೆಳೆಯೋಕೆ ಕಷ್ಟ ಪಡ್ತಿರೋ ರೈತರು. ಇಷ್ಟೆಲ್ಲದರ ಮಧ್ಯ ಮತ್ತೆ ಬೆಳೆಯನ್ನ ಎಲ್ಲಿ ತಾನೇ ಬೆಳಿಯೋದು? ಈಗ್ಲೇನೆ ನಮ್ಮ ಹೆಣ್ಣು ಮಕ್ಳು ಅಡಿಗೆ ಮನೆನ ಕೆಲಸದವರಿಗೆ ಬಾಡಿಗೆಗೆ ಕೊಟ್ಟಿದ್ದಾರೆ, ಹಿಂಗೆ ಆದ್ರೆ, ನಾವು ಮಾಡಿದ ಕರ್ಮಗಳ ಪ್ರತಿಪಲವಾಗಿ ತಿನ್ನೋಕು ಪರದಾಡಿ ಕೊನೆಗೆ ಚೈನಾದಲ್ಲಿ ಆಗಿರೋ ಹಾಗೆ ಸಿಕ್ಕಿದ್ದನೆಲ್ಲ ತಿನ್ನೋ ಪರಿಸ್ಥಿತಿ ಬಂದೆ ಬರುತ್ತೆ. ಆವಾಗ ನಮ್ಮ ಮಕ್ಕಳುಗಳು ಹಲ್ಲಿ ತಿನ್ನೋಹಂಗಾಗೊದ್ರಲ್ಲಿ ತಪ್ಪೇನಿಲ್ಲ ಅಲ್ವಾ. ಅಲ್ಲಿಗೆ ಭಾರತೀಯರು ಹಲ್ಲಿ ಹಾಗು ಜಿರಳೆ ತಿನ್ನೋದರ ಹಿಂದಿನ ರಹಸ್ಯ ಬಯಲಾಗುತ್ತೆ.
ಇಷ್ಟೆಲ್ಲಾ ನಡಿತಿದ್ದರುನು ನಮ್ಮ ಮಾಜಿ ಪ್ರಧಾನಿಗಳು ಬೊಂಬ ಬಡ್ಕೊತಾರೆ ನಮ್ಮನ್ನ ಅಧಿಕಾರಕ್ಕೆ ತಂದರೆ ಅಕ್ಕಿನ ಕೆಜಿಗೆ 2 ರೂಪಾಯಿಗೆ ಕೊಡ್ತೀವಿ. ರೀ ಸ್ವಾಮಿ, ನಮ್ಮ ರಾಜ್ಯದಲ್ಲಿ ಇರೋ ಸುಲಭ ಶೌಚಲಯನ ಉಪಯೋಗಿಸಿದರೆ 3 ರೂಪಾಯಿ ಕೊಡ್ಬೇಕು, ಅಂತಾದ್ರಲ್ಲಿ ನೀವು 2 ರೂಪಾಯಿಗೆ ಅಕ್ಕಿ ಕೊಡ್ತೀರ? ಮಾಡೋ ಕೆಲಸಗಳನ್ನ ನೆಟ್ಟಗೆ ಮಾಡಿದ್ರೆ ನೀವುಗಳು ಕೇಳಲಿಲ್ಲ ಅಂದ್ರೂನು ಅಧಿಕಾರಕ್ಕೆ ತಂದು ಕೂರಿಸೋ ದೊಡ್ಡ ಮನಸ್ಸು ನಮಗೆಲ್ಲ ಇದೆ. ಸೊ, ಮೊದಲು ಮಾಡಿ, ಆಮೇಲೆ ಮಾತಾಡಿ.
ಸರಿನೇನ್ರಿ ನನ್ನ ಮಾತು? ಹೋಗ್ಲಿ ಬಿಡಿ. ಸರಿನೋ ತಪ್ಪೋ, ಆದ್ರೆ ನಮ್ಮ ಮಕ್ಕಳು ಸ್ಕೂಲನಲ್ಲಿ ಫರ್ಸ್ಟ್ ಬರ್ಬೇಕೂಂದ್ರೆ ಈಗಿಂದಾನೆ ಮೇಲಿನ ಉತ್ತರನ ಪ್ರಬಂಧ ರೂಪದಲ್ಲಿ ರೆಡಿ ಮಾಡಿತ್ತುಕೊಳ್ಳೋಣ . ಒಂದಾದರು ಒಳ್ಳೆ ಕೆಲಸ ಮಾಡಿದ್ದೀವಿ ಅಂತ ಮಕ್ಳು ಖುಷಿ ಆಗ್ತವೆ.
ಅದ್ಸರಿ ಯಾರಾದ್ರೂ ಹಲ್ಲಿ ತಿಂದು ಅಭ್ಯಾಸ ಇದ್ರೆ ಟೇಸ್ಟು ಹೆಂಗಿರತ್ತೆ ಅಂತ ಹೇಳ್ರಿ. Mentally ಪ್ರಿಪೇರ್ ಆಗೋಣ ಅಂತ.

Saturday, December 4, 2010

SUPER- My review!


Satisfaction, happiness, thought provoking, memories.... I think the only media through which we can probably gain these emotions inside us is CINEMA. I never thought I would write something like this in my blog, but it was inevitable. Some feelings have to be put out to just relieve yourself. So am just doing the same. All the previously mentioned emotions clubbed together in a single movie is too much to ask for. Is it? Yes, but I surely got my money worth and all those feelings by watching a movie today i.e., "SUPER".
As we all know its a movie directed by Upendra after a ten year long hiatus and it just made me think that we certainly missed him and his creative thoughts in this past ten years. Yes, Uppi has certainly made a movie we all Kannadigas ought to be proud of. Its a movie which our Indian cinema needs to take a look at. Coz if you miss this, you are probably missing out one of the chapters of film-making.
The movie makes you sit through the whole 150 minutes without even blinking an eye . Am not exaggerating, right from the title card itself the audience will be involved. You can't even miss the title card. I have been thinking ways to tell the storyline, but apart from a single sentence that-it is a movie in which the hero dreams and achieves the futuristic India, I am not able to tell the story at all. Because its the screenplay which makes you come out of the movie enjoying every inch of it but unable to say the story. That has been the trademark style of Uppi and he has proved it again.
The scenes are so meticulously etched out that you will realize you can't imagine the next scene or predict the end ever. The scene in which Uppi confronts his father in front of a crowd, riduculing Indians in such a way that, we can just laugh on ourself and yet realize the impact of his thought behind that scene. Uppi's imagination about futuristic India appears so simple yet we feel why we didn't think like that. He defines the meaning of true Indian. Nayantara as the lead actress is clinical in her job and so are other characters.
Two more things which make the movie different and should laud him for his clear idea in achieving them is- the character of a FAMOUS JOURNALIST of highly circulating weekly of kannada . And the second one is the picturisation of the song -"naanu sooper ranga".Its probably an epitomy of a song how to be picturised.
All in all its a movie which is worth your money, worth your time and worth Uppis' efforts. Don't miss it. Final words to Upendra,( I know he may not read it, but) please do not take a break from directing movies and you are the best creative director to be present in the industry. Keep us entertaining.

Monday, November 15, 2010

INDESCRIBABLE!!!

One day, while I was trying to put my nephew who is 4 years old into sleep, he asked me, "mama, when I was very small what did I address you as?". Now the situations is such that a 4 year old kid who has just learnt to articulate a few meaningful sentences, is wondering what he was in his still younger days!!
It sounds astonishing when we understand the fact that we humans are never tired of knowing things. Yes, ofcourse am not speaking of syllabus in our days of schooling, the things which we do not get to learn in school seems so fascinating to all of us. Though the kind of feel which bubbles inside us when we learn a thing new to us is indescribable, the satisfaction which we get when we apply that knowledge learnt into practicality and succeed is probably like a blind person imagining how Aishwarya Rai looks like!!! Yes, its true that such a feel cannot be put into words and even if we give it a shape with words, it sounds exaggerated. So its just like hearing a picture or seeing a music. Indescribable!
Such was the situation today wherein I myself am. To share the background for this feel I need to go back a month, when as per our rotational duty postings I was posted to a unit( a unit is a mini branch of a department, say for in our surgery department we have 5 units and each unit gets to do duty on one day a week apart from saturday and sunday). So on duty on Friday, we got a case of RTA( road traffic accident) at around 3:30 pm in the afternoon. I have to clarify one thing that I can disclose only few laymen things in here and can't give out any details which are confidential and come under our medical ethics. So the guy, named X, was run over by a four wheeler vehicle over his chest and upper abdomen. On admission the condition of the guy necessitated that we had to operate on him to give him any glimmer of hope for survival. So explaining the situation to his bystanders we took him to surgery and intra-operative findings too dimmed our hopes that we could see the patient recovering at all.
The operation went very well. Everyone of us will have heard the dialogue in movies that-"operation success, but patient dead", right?? Well before entering this field that dialogue sounded funny to me too that how can that be possible when success and failure go hand in hand? But, its true that sometime operation part will be perfect but the patients' response to that post-operatively during the time of recovery will be very weak and he may succumb to it. So we expected that Mr. X might not recuperate his stress. He was on life support system for 15 days. He was conscious and responding to our commands and recognise us all the treating doctors. He though was recovering very well and certainly stronger than we expected.
So, as per rotation. in the beginning of this month I was posted elsewhere with new patients and new unit. Today evening I went back to my old unit and found this Mr. X lying in the very first bed. It took me some time to recognise him as he had lost weight and in fact he did recognise me and got up and spoke to me. His words were -" ಸರ್, ಎಲ್ಲಿದ್ದೀರಾ ಈಗ? ಬಹಳ ದಿನದಿಂದ ಕಾಣಿಸಲೇ ಇಲ್ಲ. ಬಾಳ ಚನ್ನಾಗಿ ನೋಡ್ ಕೊಂಡಿ ಜೀವ ಉಳ್ಸಿದ್ರಿ ಸಾರ್ ನೀವೆಲ್ಲ..." and all through his words his hands were folded in front of his chest!!
WOW. How could have I felt then? No words! To be honest, these are the moments that make us feel worth of being a doctor. My entire unit-mates will never forget this Mr. X.
I could have probably given a nice finishing to this article, but as I said no more words..........just......WOW............. Its like a blind guy imaging Aishwarya Rai in his vision. Only he can enjoy it, outsiders can just see that smile on his face:-)

Thursday, October 21, 2010

THANK YOU AMMA:-)

Anger!

Yes, the most dreadful enemy you can ever have is your own anger. Its true that you can use the same anger in a positive way but, when it has all the ingredients to spoil you 99 times and help you only once, its an obvious indication that we shed it off, right?!

Set aside the situations wherein our friends, relatives or any other stranger comes under the wrath of our anger. Many a times, probably innumerable times, the one person who is constantly under the wrath of our anger will be our own MOTHER!! Don't agree with me? Then just answer among yourself if you have ever done this to your mom;

" Where's my favourite T-shirt in the cupboard, did you displace it?" "Am not finding my book, did you take it?" "Oh gosh, the same old idlis/dosas/rice, don't you cook anything else?" "Why isn't my clothes ironed, I need them right now?" "I need to watch the English Premiere League, set aside your serial for one day". Atleast I will be honest to myself and say that 'yes', I have treated my mom sometimes as if she is meant to take care of me only and didn' care for her emotions. I know that we all love our mom more than anything in this world, eventhen why do we often keep doing this to our mom?

I know its neither mother's day nor woman's day to bring up this topic, but my plight now made me share it. Recently I had to be alone at home as mom-dad had to go to our village back for some work and so had to manage my duties at the hospital and also look after my tummy 3 times a day. So my mom's concern was as to what will I do with my food arrangements. Before leaving she told some hundered times to take care of it and I was like, 'Mom, am married now. Stop treating me like a kid.' I was confident that I know to cook a few dishes, courtesy again my mom, and I can just pass off these 7 days of self cooking and show to my mom that 'What a big deal!'

Well, for the first two days I did justify myself and cooked something edible and even told my mom that ' Whats there in cooking, see am working and cooking both at the same time. Don't worry.' The third day was my real test, my initial enthusiam was dipping and in the midway of my cookery show, the gas supply ended and had to change it. So due to unexpected interference to my work, my whole process went haywire and my dish was edible just becasue I had nothing else left either to eat or to cook afreash. I was so angry on myself for failing. Come'on! On whom am I angry and why? It took a while to realise that many a times when a lil bit of something was missing in the dishes cooked by mom, I used to tell her" Mom, you are getting old and losing your skills". Pity on me!! My mother has been doing this work of cooking and looking after the family without any complaints for the past 40 odd years and me fed up for just 3 days??? Thats it!?

Its not only my story, many of us behave the same. The present tech-savy generation speaks so politely to some unknown creature on the other side of a phone or ask sorry when we accidentally brush our legs to someone in public or even help pur friends with many stuffs. But how many times have we thanked our mothers for cooking our dishes, washing our clothes and even taking care of us? I don't know why do we have that ego to thank our very own cause of existence. No mother expects her child to appreciate her, thats because she never does these works to impress us. She knows that her child needs her. Its our conscience which has to wake up and realise that she too feels heavens in her arms if her child showers love on her. Though it sounds new to literally thank our mother with words, it has a simple way to do it too. No need to express that openly if you can't, but as pointed out earlier, lets cut down our unwanted anger on our mothers. Do not take her for granted and thats the biggest thanking we can give.Lets wake up, better late than never, and let us take this opportunity to thank our mothers for "BEING OUR MOTHER".

SORRY MOM IF I HAVE HURT YOU EVER AND GIVE ME ANOTHER CHANCE TO BE YOUR OFFSHOOT:-)

Thursday, July 15, 2010

TO DRUNKARDS, WITH LOVE.

Everyone is quite familiar with the saying " Learn from your mistakes", isn't it? I guess its a yes for an answer. But the question is, ' Do we really?' And this time around its never a clear yes, right!!

Since decades or may be be since centuries our so called 'ಪೋಲಿ'ticians are trying(?) to ban liquor from the society!!! Surprisingly, they are successful too. Now, no one drinks in the society; they just stay 'tight' at home itself. The reason to bring out the topic of "alcoholism" now is simple- may be people aren't fed of drinking; but we doctors are bored and have become emotionless seeing them dying each and everyday. The worst part is, we stand helpless watching the soul packing its journey towards heaven (coz its only there you get "ಮದಿರ" ಟು ಡ್ರಿಂಕ್ ಆಫ್ಟರ್ death) right in front of our eyes in the emergency wards.

Last month in my duty, at around 12 midnight, a male in his 40s was brought to our casualty, complaining of pain abdomen since 2 days. The patient was in distress and appeared toxic, and all preliminaries tests were done and it was found out that the patient had 'alcoholic cirrhosis' and was in pre-hepatic failure state. Funny part is, on enquiring his wife about his alcohol habits, she said she used to serve alcohol everyday at home just to avoid him from going to bar ("ಸತಿ ಸಾವಿತ್ರಿ"). The patient was a chronic alcoholic from past 25 years( so it makes that he had drinking habit since 15 yrs of age) and his plight was explained to the wife saying that his liver is damaged beyond repair and only solution was either afford for a transplant or wait for the nature to take its natural course of action( death in simple words). As expectantly they just preferred to wait till the patient passes away.

It might sound so cruel for outsiders' but we see such cases everyday and we feel helpless that despite being healers, we just can't help them unless they help themselves. Am not saying that we should ban liquor and be teetotalers, but at least we must know our limits and stop everything beyond the line.

I just remember a funny line( actually its an educative tag line by govt. of Karnataka to discourage drinking)-" ಮಧ್ಯಪಾನ ಮಾಡಿ , ವಾಹನ ಚಾಲನೆ ಮಾಡಬೇಡಿ" instead of being ಮಧ್ಯಪಾನ ಮಾಡಿದಾಗ ವಾಹನ ಚಾಲನೆ ಮಾಡಬೇಡಿ, its like encouraging them to drink, but not drive. Poor govt.,.

So wherever you are, its for all DRUNKARDS, WITH LOVE- "HELP US HELP YOU".

Thursday, June 10, 2010

ಜಸ್ಟ್ ಮಾತ್ ಮಾತಲ್ಲಿ....

Its been too long since i last posted in my blog and here I am, back in the business. And i do promise to myself that I'l be regularly updating the facts and fictions of my life, henceforth. My own world and the one around me has changed dramatically in a span of time when my body completed its one full journey, around the sun, i.e., a year since i last posted. Another milestone has been etched in the path of my life. Life till now was a "carefree" bird and since the wedding its been a "careful" bird. Err, i know you people think the other way round, so, before u conclude wrong meaing of the words, let me explain. "Carefree" was the attitude then, coz whatever the consequences of my action, were entirely on me; "Careful" is the attitude now, coz, it is not only me, now I have a soulmate who will also bear the grunt of my actions. That does not mean I have become extracautious. Life is the same with only a new soul being a part of your routine. Every friend of mine starts the conversation over the phone with a preformed sentence- ಏನಪ್ಪ ಹೆಂಗಿದೆ ಮ್ಯಾರೀಡ್ ಲೈಫು? To be honest, "there is not a change". It gives you more secure feeling in life that, once you end your day, you have a person waiting for you to talk you out of your day's frustrations, share your day's success, ward off your day's sadness, face your silly anger and yet give you back a soothing smile. In simple words, a partner is your stress buster. And do not forget that you need to be their stress buster too, which most of the times we tend to overlook at. I hereby wish all my friends who are gonna enter their wedlock sooner or later to find the best possible stress buster of your life.

So, other than my wedding, in the last one year few of my friends also have entered their ಗೃಹಸ್ತಾಶ್ರಮ. To name a few, Dr.Sai Krishna,Dr. Tejal, Dr.Harish, Dr. Nafseer, Dr. shubratha, Archana, Manohar and PMP. Hey people welcome to the alumnus!

On the career front,I have entered into the second year of my postgraduation now. Surgery is getting interesting day by day, yet scary with the potential risks involved.

A couple, who both happen to be common friends of mine and Latha, Goutham and Teju had come back to hometown davanagere from US after a year and half. Did meet them and spend some nice time over lunch. Happy to see the couple( one year seniors to us in wedding:-) ) having splendid comfortness with each other and each other's families. Hey guys wish you lots of love and success always. By the time you read this blog, i guess you will be back in US. Bon Voyage.

And lastly, its often to forget our own families isn't it? My appa, amma, akka, bhaava, amshi and also everybody in Latha's family are having quiet time in their day to day proceedings. So then, I will sign off now and be back with a story of DAY TIME ROBBERS IN NOKIA CARE in davanagere. Until then, happy times to all of you.!

Monday, July 20, 2009

PS: I LOVE YOU

“HAVOC”- that’s the word which has been in the headlines everywhere now. Isn’t it?
“Rain plays havoc in Karnataka!!” “Recession is continuing to play havoc in the market!!” “Terrorists create havoc in Mumbai!!”….. The list goes on and on…!
But the thing to be noticed is the use of the word “HAVOC” for all such miscreant or not so happy situations. Why can’t it be used to any happy circumstances??
I feel it can be used in a different way and let me use it to say;” The last one and half months have brought in havoc of changes in my life!!” Bemused is it!! Let me substantiate my mords then.
I would definitely love to share about that havoc creator in my life. It’s my fiancée- Latha. Though a simple and happy go lucky kind of girl, like any other, she holds a special place in my heart and has been the reason behind the significant changes in these one and half months. I knew her from past 12 yrs and though not any yash chopra kind of a decade long love story, both of us did find the ideal partners in one another and finally, with the blessings of our elders got engaged on 21st of June and soon will be tying the knot in December.
Yesterday, that is on Saturday the 18th of July, she was felicitated by her old school (which happens to be my old school too, where I had met her in my high school days), Anubhava Mantapa, for being an achiever and a successful M.Tech degree holder from IIT MUMBAI (yep, she is brainy and with too much filled in her brains, she often forgets normal routines!!!). It was a sight to behold. Just to give you a feel of that moment, imagine how it might be to see-Your girl being felicitated in front of a large gathering with you being amongst those crowds, hearing praises about her and joining hands to applaud her!! Sounds a moment of worth, right?! It was definitely a proud moment, with my dad, mom, sis, jeeju, her mom and relatives feeling high about her and feet off the ground..!!!
Life in these one and half months has been seemingly happy, with satisfying academic career, ever supportive parents, and innumerable friends and of course the havoc creator, my fiancée. I wish such a time to everyone as it is really a havoc time to have.
Ah ah, one more thing, my fiancée feels am too disciplined and socially correct kind of a guy behaving like a good good goody always. So just to prove her wrong, I need to say something to her where anyone in worldwide web can see- Hey Lathu, I Love You!

Friday, May 29, 2009

THE ANT AND THE GRASSHOPPER

The story of an Ant and The Grasshopper.
I just loved this e-mail, and thought of sharing it. Its really a food for thought story. Enjoy!!

The Ant works hard in the withering heat all summer building its house and laying up supplies for the winter.The Grasshopper thinks the Ant is a fool and laughs & dances & plays and summer away.
Come winter, the Ant is warm and well fed. The Grasshopper has no food or shelter so he dies out in the cold.


*Indian Version:**

The Ant works hard in the withering heat all summer building its house and laying up supplies for the winter. The Grasshopper thinks the Ant's a fool and laughs & dances & plays the summer away.
Come winter, the shivering Grasshopper calls a press conference and demands to know why the Ant should be allowed to be warm and well fed while others are cold and starving.
NDTV, BBC, CNN show up to provide pictures of the shivering Grasshopper next to a video of the Ant in his comfortable home with a table filled with food.
The World is stunned by the sharp contrast. How can this be that this poor Grasshopper is allowed to suffer so?
Arundhat Roy stages a demonstration in front of the Ant's house.*
Medha Patkar goes on a fast along with other Grasshoppers demanding that Grasshoppers be relocated to warmer climates during winter.
Mayawati states this as `injustice' done on Minorities.
Amnesty International and Koffi Annan criticize the Indian Government for not upholding the fundamental rights of the Grasshopper.
The Internet is flooded with online petitions seeking support to the Grasshopper (many promising Heaven and Everlasting Peace for prompt support as against the wrath of God for non-compliance) .
Opposition MPs stage a walkout. Left parties call for ' Bengal Bandh' in West Bengal and Kerala demanding a Judicial Enquiry.
CPM in Kerala immediately passes a law preventing Ants from working hard in the heat so as to bring about equality of poverty among Ants and Grasshoppers.
Lalu Prasad allocates one free coach to Grasshoppers on all Indian Railway Trains, aptly named as the 'Grasshopper Rath'.
Finally, the Judicial Committee drafts the ' Prevention of Terrorism Against Grasshoppers Act' [POTAGA], with effect from the beginning of the winter.
Arjun Singh makes 'Special Reservation ' for Grasshoppers in Educational Institutions & in Government Services.
The Ant is fined for failing to comply with POTAGA and having nothing left to pay his retroactive taxes, it's home is confiscated by the Government and handed over to the Grasshopper in a ceremony covered by NDTV.
Arundhati Roy calls it ' A Triumph of Justice'.
Lalu calls it 'Socialistic Justice '.
CPM calls it the ' Revolutionary Resurgence of the Downtrodden '
Koffi Annan invites the Grasshopper to address the UN General Assembly. **



Many years later....**
The Ant has since migrated to the US and set up a multi-billion dollar company in Silicon Valley , 100s of Grasshoppers still die of starvation despite reservation somewhere in India ,



AND



As a result of loosing lot of hard working Ants and feeding the grasshoppers, India is still a developing country.

ಹನ್ನೆರಡು ವರ್ಷಗಳ ನಂತರ...!!


ಹಳೆಯದೊಂದು ಹಾಡು ಎಲ್ಲರಿಗು ನೆನಪಿರುತ್ತೆ-" ಹಾವಿನ ದ್ವೇಷ ಹನ್ನೆರಡು ವರುಷ, ನನ್ನ ದ್ವೇಷ ನೂರು ವರುಷ" ಅಂತ. ಇಲ್ಲಿ ಯಾಕಪ್ಪಾ ಇದು ಅಂದ್ರೆ, ದ್ವೇಷದ ವಿಷಯ ಅಂತಂದಾಗ ಅಷ್ಟೊಂದು long years ತನಕ ನೆನಪು ಇಟ್ಕೊಳ್ಳೋದು ಸಹಜ.Help ಮಾಡಿರೋ ವಿಷಯಗಳನ್ನ , ಜನರನ್ನ ನೆನೆಸಿಕೊಳ್ಳೋದು ಕಡಿಮೇನೆ. ಅದು ಅಲ್ಲದೆ, ಈಗಿನ ಕಾಲದಲ್ಲಿ ನಾವು students ಗಳೇ teachers ಗಳನ್ನ ನೆನಪಿಡೋದು ಕಷ್ಟ, ಅಂತಾದ್ರಲ್ಲಿ ಒಬ್ಬ teacher ತನ್ನ ಸ್ಟುಡೆಂಟ್ ನೆನಪಿಟ್ಟು ಮಾತನಾಡಿಸಿದರೆ ಅದಕ್ಕಿಂತ ಸಂತೋಷ ಬೇರೆ ಇಲ್ಲ I guess.


ಅಂತ ಒಂದು situation ನನ್ನು ನಾನು witness ಮಾಡಿದ್ದು ಮೊನ್ನೆ. ನನ್ನ "ಅನುಭವ ಮಂಟಪ" ಸ್ನೇಹಿತರಿಗೆಲ್ಲ ನಮ್ಮ ಒಬ್ಬ ಸರ್ ಬಗ್ಗೆ ಕಂಡಿತ ನೆನಪಿರುತ್ತೆ.. ಅವ್ರು ನಮ್ಮ V.N sir, ನಮ್ಮ ಕನ್ನಡ ಮಾಸ್ತರ್ ವಾಸುದೇವ್ ನಾಡಿಗ್. ನಮ್ಮ ಸ್ಕೂಲ್ ನಲ್ಲಿ, ಜಸ್ಟ್ ಎರಡು ವರ್ಷ ಮಾತ್ರ ಇದ್ದರು, ಆದ್ರೆ ನನ್ನ ಪ್ರಕಾರ he left there behind an everlasting impression.ಬಹಳ ಜನ ಸರ್ ನನಗೆ partiality ಮಾಡುತ್ತಿದ್ದರು ಅಂತ ಒಂದು feel. ಅದು ನಿಜ ಅಲ್ಲದೆ ಇದ್ದರು, i liked that feel though!!!


ಇದ್ದಕ್ಕಿದ್ದ ಹಾಗೆ ನೆನಪು ಹೇಗೆ ಅಂದ್ರೆ, ನಾನು ಮತ್ತು ನನ್ನ ಸ್ನೇಹಿತೆ( ಅದು ಯಾರು ಅಂತ ಮುಂದಿನ ಬ್ಲಾಗ್ ಗಳಲ್ಲಿ ತಿಳಿಸುತ್ತೇನೆ) ಬಹಳ ದಿನಗಳಿಂದ(ಕಳೆದ ೧೨ ವರ್ಷದಿಂದ ನಾನು ಅವರನ್ನ ಭೇಟಿ ಮಾಡಿಲ್ಲ)ಅವರ contact ಗೆ try ಮಾಡ್ತಾ ಇದ್ವಿ. ಅದು ಹೇಗೋ ಮೊನ್ನೆಯ ದಿನ, ಅನಿರೀಕ್ಷಿತ ರೀತಿಯಲ್ಲಿ ಇಂಟರ್ನೆಟ್ನಲ್ಲಿ ಅವಳಿಗೆ ಅವರ ನಂಬರ್ ಸಿಕ್ತು. ಅಳುಕಿನಿಂದಲೇ ಡಯಲ್ ಮಾಡಿ ನೋಡಿದ್ರೆ ಅವ್ರೆ ಫೋನ್ recieve ಮಾಡಿದ್ರು. ನಮ್ಮ ಜೊತೆ ಮಾತಾಡಿ ಖುಷಿ ಪಟ್ಟರು. ನಮ್ಮಿಬ್ಬರಿಗೂ ಖುಷಿ ಕೊಟ್ಟ ಸಂಗತಿ ಅಂದ್ರೆ, ಅವ್ರು ನಮ್ಮನ್ನು recognise ಮಾಡಿದ್ದು , ಅದಕ್ಕಿಂತ ಜಾಸ್ತಿ ಏನು ಬೇಕು?


ಸರ್ ಸಧ್ಯದಲ್ಲೇ ಮೀಟ್ ಮಾಡೋ ಯೋಚನೆ ಇದೆ. ಅವರನ್ನ ಭೇಟಿ ಆದ ಮೇಲೆ ಇನ್ನಷ್ಟು ವಿಷಯಗಳನ್ನ ಬರೆಯುತ್ತೀನಿ. ಅಂದಹಾಗೆ, ಸರ್ ಈಗ ಬೆಂಗಳೂರಿನ ಬಳಿಯ ಚಿಂತಾಮಣಿ ತಾಲೂಕಿನ ಬಳಿ " ನವೋದಯ ಶಾಲೆಯಲ್ಲಿ" ಶಿಕ್ಷಕರಾಗಿದ್ದಾರೆ. "ನಚಿಕೇತ" ಎಂಬ ಪುಟ್ಟ ಮಗ ಇದ್ದಾನೆ. ಸೊ, ಮತ್ತೆ ಬರೆಯುವವರೆಗೂ.......

Wednesday, May 13, 2009

"ತುಂಟಾ"ಟಗಳು ಭಾಗ-2


ನಾನು, ಇದರ ಹಿಂದಿನ ಬ್ಲಾಗ್ ಬರೆಯುವಾಗ, ನಮ್ಮ ತಂಡದ ಹೆಸರು ಯಾವ ಕಾರಣಕ್ಕಾಗಿ "೨೦೦೧ರ ತುಂಟ"ರು ಅಂತ ಬಂತು ಅನ್ನೋದರ ಹಿಂದಿನ ಘಟನೆ ಹಾಗೂ ನಮ್ಮ ತಂಡದ ಚಟುವಟಿಕೆಗಳ ಬಗ್ಗೆ ತಿಳಿಸಿಕೊಡುತ್ತೀನಿ ಅಂತ ಹೇಳಿದ್ದೆ. ಇಲ್ಲಿ ಆ ಪ್ರಸಂಗಗಳನ್ನ ನೆನಪಿಸಿಕೊಡ್ತೀನಿ.
ಆ ಒಂದು ಮಾತು ಮರೆತಿದ್ದೆ. ಅದೇನೆಂದರೆ, ಹಿಂದಿನ ಬ್ಲಾಗ್ ಓದಿದ ನನ್ನ ತಂಡದ ಸ್ನೇಹಿತರು, ನನ್ನ ಅಡ್ಡ ಹೆಸರನ್ನು ಯಾಕೆ ಹೇಳಿಕೊಂಡಿಲ್ಲ ಅಂಥ ಪ್ರಶ್ನಿಸುತ್ತಾ ಇದ್ದರೆ. ಆದ ಕಾರಣ ಇಲ್ಲಿ ಹೇಳಿಬಿಡುತ್ತೇನೆ. ನನಗೆ ನನ್ನ ತಂಡದವರು "ಮಠಾಧೀಶ" ಅಂಥ ನಾಮಕರಣ ಮಾಡಿರೋದುಂಟು. ಅದಕ್ಕೆ ಅಂಥಾ ವಿಶೇಷ ಕಾರಣ ಏನು ಇಲ್ಲ, ಹಾಗಂತ ಸುಳ್ಳು ಹೇಳೋಕ್ಕೊಗಲ್ಲ. ಮಾತಿನಲ್ಲಿ ಎಲ್ಲರಿಗು ಮಠ ಹತ್ತಿಸೋ ಕೆಲಸವನ್ನ ಅಚ್ಚುಕಟ್ಟಾಗಿ ಮಾಡುವ ನಿಪುಣತೆ ಇತ್ತು ಅನ್ನೋ ಹಿನ್ನೆಲೆಯಿಂದ. ಅದು ಎಷ್ಟು ಸುಳ್ಳು-ಎಷ್ಟು ನಿಜ ಅನ್ನೋದನ್ನ ಅವರುಗಳೇ ಹೇಳಬೇಕು!!!
"ಮೈಸೂರು ವೈದ್ಯಕೀಯ ಮಹಾವಿದ್ಯಾಲಯ", ಈ ಸಂಸ್ಥೆಯ ಹೆಸರು ಕೇಳಿದ್ರೆ ಎಲ್ಲ್ರೂ ಹೇಳೋ ಒಂದೇ ಮಾತು- ಬಹಳ ಒಳ್ಳೇ ಕಾಲೇಜು, ಅಲ್ಲಿಗೆ ಸೇರೋರೆಲ್ಲ ಬುದ್ದಿವಂತ್ರು. ಹೌದು. ನಿಜ ಕೂಡಾ.ಇಲ್ಲಿಗೆ ಬರೋ ಎಲ್ಲರೂ ಅವರವರ ಊರುಗಳ, ಅವರವರ ಹಿಂದಿನ ಕಾಲೇಜಿನ ಅತ್ಯುತ್ತಮ ವಿದ್ಯಾರ್ಥಿಗಳಾಗಿದ್ದವರೆ.ಆದಕಾರಣ,ಈ ಕಾಲೇಜಿನಲ್ಲಿ ನಮ್ಮನ್ನ ನಾವು ಗುರುತಿಸಿಕೊಳ್ಳಬೇಕು ಅಂದ್ರೆ ಕ್ಲಾಸ್ ರೂಮಿನಿಂದ ಹೊರಗಿನ ಚಟುವಟಿಕೆಗಳಿಂದ ಮಾತ್ರ ಸಾಧ್ಯವಿತ್ತು.
ಕಾಲೇಜಿಗೆ ಪಾದರ್ಪಣೆ ಮಾಡಿದ ಮೊದಲ ಮೂರು ತಿಂಗಳುಗಳ ಕಾಲ ಏನಿದ್ದರೂ ಹೊಸ ಸ್ನೇಹಿತರ ಪರಿಚಯ, ಸೀನಿಯರ್ಸ್ಗ್ ಗಳ ರಾಗಿಂಗ್, ಮೈಸೂರು ನಗರ ಪರ್ಯಟನೆಯಲ್ಲೇ ಕಳೆದುಹೊಯ್ತು. ಇದರ ಮಧ್ಯೆ ನಮ್ಮ ಕಾಲೇಜಿನಲ್ಲಿ ಪ್ರತೀವರ್ಷದಂತೆ ಆ ವರ್ಷದ ವಾರ್ಷಿಕ ಫೆಷ್ಟ್(ಹಬ್ಬ) ಶುರುವಾಯ್ತು. ಆ ಫೆಷ್ಟಿನಲ್ಲಿ ನಾವುಗಳೂ ಏನದರೂ ಕಾರ್ಯಕ್ರಮ ಕೊಡಬೇಕು ಅನ್ನೋ ಹಂಬಲ. ಆವಾಗ ಶುರುವಾಗಿದ್ದು ಈ ತಂಡಗಳನ್ನ ಕಟ್ಟಿಕೊಳ್ಳೋ ವಿಚಾರ. ನಮ್ಮ ಬ್ಯಾಚಿನಿಂದ ಎರಡು ತಂಡಗಳು "ಸ್ಕಿಟ್ ಮತ್ತು ಮ್ಯಾಡ್ ಆಡ್ಸ್ " ಕಾರ್ಯಕ್ರಮದಲ್ಲಿ ಭಾಗವಹಿಸಿದ್ವಿ.ಆದರೆ ಸ್ವಾರಸ್ಯಕರ ವಿಷಯ ಅಂದ್ರೆ, ಆ ಎರಡು ತಂಡಗಳ ಪೈಕಿ ನಾನು ಒಬ್ಬನೇ ಒಂದು ತಂಡದಲ್ಲಿ ಇದ್ದರೆ, ನಮ್ಮ ಈಗಿನ ತುಂಟ ತಂಡದ ಉಳಿದವರೆಲ್ಲರೂ ಇನ್ನೊಂದು ತಂಡದಲ್ಲಿದ್ದರು.
ನಾನು ಭಾಗವಹಿಸಿದ ತಂಡ ಮ್ಯಾಡ್ ಆಡ್ಸ್ ನಲ್ಲಿ ಎರಡನೆ ಬಹುಮಾನ ಗಿಟ್ಟಿಸಿದರೆ, ನನ್ನ ಸ್ನೇಹಿತರೆಲ್ಲರೂ ಇದ್ದ ಇನ್ನೊಂದು ತಂಡ- ಮ್ ಮ್ ಮ್, ತಮ್ಮ ಮೊಟ್ಟಮೊದಲ ಸ್ಟೇಜ್ ಷೋನಲ್ಲಿ "ಡಿಸ್-ಕ್ವಾಲಿಫೈ" ಆಗಿದ್ದರು. ಹಾಗಂತ ಸರಿಯಾಗಿ ಫರ್ಫಾರಮೆನ್ಸ್ ಕೊಡಲಿಲ್ಲ ಅಂತಲ್ಲ, ಬದಲಾಗಿ ಅಶ್ಲೀಲತೆ ಜಾಸ್ತಿ ಇತ್ತು ಅನ್ನೋ ಕಾರಣಕ್ಕಾಗಿ. ಆದರೆ, ಅವರು ಮಾಡಿದ ಆ ಸಾಹಸದಿಂದ ಸೀನಿಯರ್ಸ್-ಗಳ ಹಾಟ್ ಫೇವರೇಟ್ ಆಗಿದ್ದಂತು ಆಶ್ಚರ್ಯವೇ ಸರಿ.
ಇದಾದ ನಂತರ ಸ್ಕಿಟ್ ಕಾರ್ಯಕ್ರಮವಿತ್ತು. ಆ ಕಾರ್ಯಕ್ರಮದಲ್ಲಿ ನಮ್ಮ ಆ "ಡಿಸ್-ಕ್ವಾಲಿಫೈ" ಆದ ಸ್ನೇಹಿತರ ತಂಡ ಮತ್ತೊಮ್ಮೆ ಸ್ಕಿಟ್ ಮಾಡೋ ಯೋಚನೆ ಮಾಡಿದರು. ಆದರೆ ಈ ಬಾರಿ ಕೊಂಚ ವಿಭಿನ್ನವಾಗಿ ಮಾಡೋ ಯೋಚನೆ ಹೊತ್ತು, ನಮ್ಮ ಕಾಲೇಜಿನ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಕನ್ನಡದಲ್ಲಿ ಸ್ಕಿಟ್ ಮಾಡಿದರು. ಅದನ್ನ ಸ್ಕಿಟ್ ಅನ್ನೋದಕ್ಕಿಂತ ಮೂವಿ ಸ್ಫೂಫ್ ಅನ್ನುತ್ತಾರೆ( ಅಂದರೆ ಒಂದು ಚಲನಚಿತ್ರದ ಕಥೆಯ ಎಳೆಯನ್ನು ತೆಗೆದುಕೊಂಡು ಆ ಕಥೆಗೆ ವಿಭಿನ್ನ ಆಯಾಮಗಳನ್ನ, ಉಪಕಥೆಗಳನ್ನ ಸೇರಿಸಿ ಇನ್ನಷ್ಟು ಸ್ವಾರಸ್ಯಕರವಾಗಿ ಮಾಡುವುದು. ಆದರೆ ಇಲ್ಲಿ ಸ್ಟೇಜ್ ಮೇಲೆ ಅಭಿನಯಿಸುವ ಯವುದೇ ಕಲಾವಿದ ಮಾತನಾಡುವುದಿಲ್ಲ, ಬದಲಾಗಿ ಹಿನ್ನೆಲೆ ಧ್ವನಿಗೆ ಅನುಗುಣವಾಗಿ ತನ್ನ ದೇಹ ಚಲನ ವಲನಗಳ ಮೂಲಕ ಅಭಿನಯಿಸಬೇಕು). ಇಂತಹ ಕರ್ಯಕ್ರಮದಲ್ಲಿ ಅವರೆಲ್ಲ ಸೇರಿ "ಬಭ್ರುವಾಹನ" ಚಲನಚಿತ್ರವನ್ನ ಆಯ್ದು, ಅದನ್ನ "ಗಬ್ಬುವಾಹನ" ಅನ್ನೋ ರೀತಿಯಲ್ಲಿ ಬದಲಾಯಿಸಿ ಬಹಳ ಅಚ್ಚುಕಟ್ಟಾಗಿ ಪ್ರದರ್ಶಿಸಿದರು .
ನಿಜವಾಗಿಯೂ ಆ ಒಂದು ಕಾರ್ಯಕ್ರಮವನ್ನ ಎಲ್ಲರೂ ಮುಕ್ತಕಂಠದಿಂದ ಪ್ರಶಂಶಿಸಿದರು.ಆ ಅರ್ಹತೆ ಅದಕ್ಕಿತ್ತು .ನಮ್ಮ ಕಣಗಾಲನ ಹಿನ್ನೆಲೆ ಧ್ವನಿ, ಗಬ್ಬುವಾಹನಾಗಿ ಕಿಟ್ಟಿ ಹಾಗೂ ಅರ್ಜುನನಾಗಿ ಕೆ.ಪಿಯ ಅಭಿನಯ, ತೇಜಸ್ವಿ, ,ವಿನಯ್,ಗಿರಿ, ಇವರೆಲ್ಲರ ಪಾತ್ರ ಪೋಷಣೆಗಳು ನಿಜಕ್ಕೂ ನಮಗೆಲ್ಲ ಅಚ್ಚರಿಯ ಸಂತಸಗಳಾಗಿದ್ದವು. ಚಿದು ಪಾತ್ರಧಾರಿಯಾಗಿರದಿದ್ದರು ಸ್ಕ್ರಿಪ್ಟ್ ವಿಷಯದಲ್ಲಿ ಸಹಾಯ ಮಾಡಿದ್ದ.ವಿಪರ್ಯಾಸ ಅಂದರೆ ಆ ತಂಡದಲ್ಲಿ ನಾನಿನ್ನೂ ಸದಸ್ಯನಾಗಿರಲಿಲ್ಲ. ಆ ಸ್ಕಿಟ್ಟಿನಲ್ಲಿ ನಾನೂ ಒಂದು ಪಾತ್ರವಾಗಬೇಕಿತ್ತು ಅನ್ನಿಸದೇ ಇರಲಿಲ್ಲ.
ಆದರೆ, ನನ್ನ ಅದೃಷ್ಟಕ್ಕೆ ಆ ತಂಡದ ಎಲ್ಲರೂ ನನ್ನನ್ನ ಅವರ ತಂಡದೊಳಗೆ ಒಬ್ಬ ಸದಸ್ಯನಾಗಿ ಸೇರಿಸಿಕೊಳ್ಳಬಯಸಿದ್ದು. ಆ ತಂಡದಲ್ಲಿದ್ದವ್ರೆಲ್ಲರೂ ಹಾಸ್ಟೆಲ್ಲಿನಲ್ಲಿ ನನ್ನ ಹತ್ತಿರದ ಒಡಾನಾಡಿಗಳಾಗಿದ್ದರಿಂದ ನನ್ನನ್ನು ತಮ್ಮವನೊಬ್ಬನಾಗಿ ಸೇರಿಸಿಕೊಳ್ಳಬಯಸಿದರೇನೊ. ಏನೇ ಆದ್ರೂ, ಅವರ ಆ ನಡೆ ನನಗೆ ಅತ್ಯಂತ ಖುಶಿ ನೀಡಿದ್ದರಲ್ಲಿ ಎರಡು ಮಾತಿಲ್ಲ. ಈ ಮೂಲಕ ಅದಕ್ಕೆ ಧನ್ಯವಾದಗಳನ್ನ ತಿಳಿಸುತ್ತೇನೆ.
ನಮ್ಮ ತಂಡವೇನೋ ಅಸ್ತಿತ್ಥ್ವಕ್ಕೆ ಬಂತು, ಆದರೆ ತಂಡಕ್ಕೆ ಹೆಸರು ಇನ್ನಾ ಶೋಧನೆಯಲ್ಲಿತ್ತು. ಆ ಸಮಯದಲ್ಲಿ, ನಮ್ಮ ಕಾಲೇಜಿನಲ್ಲಿ ನಮ್ಮ ಸೀನಿಯರ್ಸ್-ಗಳ ಒಂದು ಸ್ಕಿಟ್ ತಂಡವಿತ್ತು. ಅವರು ತಮ್ಮನ್ನ "ಕೂಳೆ ಡಾಕ್ಸ್"(ಕೂಳೆ ಅಂದ್ರೆ ಮೈಸೂರು ಭಾಷೇಲಿ ಜಾಲಿಯಾಗಿರುವುದು ಎಂದರ್ಥ.ಡಾಕ್ಸ್ ಅನ್ನೋದು ಡಾಕ್ಟರ್ಸ್-ಗೆ ಶಾರ್ಟ್ ಫಾರ್ಮ್) ಅಂತ ಕರೆದುಕೊಳ್ಳೊವ್ರು. ಅವರ ಒಂದು ಸ್ಕಿಟ್ತಿನಲ್ಲಿ ಒಂದು ಹಾಸ್ಯ ಸನ್ನಿವೇಶದಲ್ಲಿ ಈ ತರಹದ ಪ್ರಷ್ಣಾರ್ಥಕ ಪ್ರಸಂಗವಿತ್ತು- "ಕಾಲಿಲ್ಲದವನಿಗೆ "ಕುಂಟ" ಅಂತ ಕರೀತಾರೆ, ಕಾಲಿಲ್ಲದವನಿಗೆ ಕುಂಟ ಅಂತ ಕರೀತಾರೆ, ಆದರೆ, ಏನಿಲ್ಲದವನಿಗೆ "ತುಂಟ" ಅಂತ ಕರಿತಾರೆ???" ಹೌದು, ಆ ಸಾಲಿನ ಅರ್ಥವನ್ನ ನೀವೆಲ್ಲ ಈಗಾಗಲೆ ಕಲ್ಪಿಸಿಕೊಂಡಿರುತ್ತೀರಾ. ಅದು ವಿಭಿನ್ನಾರ್ಥ ಕೊಟ್ಟರೂ, "ತುಂಟ" ಅನ್ನೋ ಪದ ನಮ್ಮೆಲ್ಲರಿಗೂ ಇಷ್ಟವಾಗಿತ್ತು. ಹಾಗಾಗಿ ಅದನ್ನೇ ನಮ್ಮ ತಂಡದ ಹೆಸರು ಮಾಡಿಕೊಳ್ಳೋ ಒಮ್ಮತಕ್ಕೆ ಬಂದೆವು. ಇನ್ನು ನಾವೆಲ್ಲ ನಮ್ಮ ಕಾಲೇಜಿಗೆ ಕಾಲಿಟ್ಟ ವರ್ಷ ೨೦೦೧ನೆ ಇಸವಿಯದ್ದರಿಂದ, ಆ ಇಸವಿಯನ್ನ ನಮ್ಮ ತಂಡದ ಹೆಸರಿನೊಂದಿಗೆ ಸೇರಿಸಿಕೊಂಡೆವು.
ಹೀಗೆ ಜನಿಸಿದ್ದೆ ನಮ್ಮ "೨೦೦೧ರ್ ತುಂಟ"ರು ತಂಡ. ಈ ನಮ್ಮ ಕಥೆ ನಿಮಗೆಲ್ಲರಿಗೂ ಖುಷಿ ನೀಡಿದ್ದೇ ಹೌದಾದರೆ, ಇದೇ ರೀತಿಯ ಸ್ವಾರಸ್ಯಕರ ಕಥೆಗಳನ್ನ ನಿರೀಕ್ಶಿಸಿ. ಸಧ್ಯಕ್ಕೆ ಇಲ್ಲಿಗೆ ನಿಲ್ಲಿಸುತ್ತೇನೆ. ಮತ್ತೆ ಬರೆಯುತ್ತೇನೆ.

Monday, May 4, 2009

"ತುಂಟಾ"ಟಗಳು


ನಿನ್ನೆ ಟಿ.ವಿಯಲ್ಲಿ ಐ.ಪಿ.ಎಲ್ ಟೂರ್ನಮೆಂಟಿನ ಬೆಂಗಳೂರು ಮತ್ತು ಮುಂಬಯಿ ತಂಡಗಳ ನಡುವಿನ ಹಣಾಹಣಿ ನೋಡುತ್ತಿದ್ದಾಗ, ಪ್ರೇಕ್ಷಕರ ಗ್ಯಾಲರಿಯಲ್ಲಿ ಕನ್ನಡದ ಫಲಕ ಕಣ್ಣಿಗೆ ಬಿತ್ತು." ಬೆಂಗಳೂರು ನಾವು ನಿಮ್ಮ ಜೊತೆಗಿದ್ದೀವಿ"- ಈ ಫಲಕ ನೋಡಿದಾಗ ಓಂದು ರೀತಿಯ ಪುಳಕ. ಇದೇ ರೀತಿಯ ಒಂದು ಅನುಭವವನ್ನ ನನ್ನ ಸ್ನೇಹಿತ ಗೌತಮ್ ವಿಮಾನಯಾನದಲ್ಲಿ ಪರದೇಶದ ನೆಲದಲ್ಲಿ ಕೇಳಿದ ಕನ್ನಡದ ಮಾತುಗಳ ಬಗ್ಗೆ ತನ್ನ ಬ್ಲಾಗ್ನಲ್ಲಿ ಹಂಚಿಕೊಂಡಿದ್ದಾನೆ. ಬಹುಶ ಕನ್ನಡದ ಮಹಿಮೆಯೇ ಆ ರೀತಿ ಇರಬೇಕು. ಎಷ್ಟೇ ಭಾಷೆ ಕಲಿತರೂ ನಮ್ಮ ಭಾಷೆಯಲ್ಲಿ ಮಾತಾಡುವಾಗ ಅಥವ ಬರೆಯುವಾಗ ಏನೋ ಒಂದು ರೀತಿಯ ಅನಂದ. ಅಲ್ಲದೆ ನಮ್ಮ ಭಾಷೆಯಲ್ಲಿ ಬರೆದಾಗ ನಿಜವಾದ ಭಾವನೆಗಳು ಹೊರಹೊಮ್ಮಬಹುದು. ಅದೇ ಕಾರಣದಿಂದ "ನಮ್ಮ ಕನ್ನಡ"ದಲ್ಲಿ ಈ ನನ್ನ ಬರಹದ ಗುಚ್ಚ.
ನಾನು ಚಿಕ್ಕವನಾಗಿದ್ದಾಗಿನಿಂದ್ಲೂ ಕನ್ನಡವನ್ನ ಇಷ್ಟ ಪಟ್ಟಿದ್ದೀನಿ, ಪ್ರಥಮ ಭಾಷೆಯಾಗಿ ಓದಿದೇನೆ ಕೂಡ. ಆದ್ರೆ ಅಭಿಮಾನ ಅನ್ನೋದರ ನಿಜಾರ್ಥ ಬಹುಶಃ ತಿಳಿದಿರಲಿಲ್ಲ. ಅದು ಆಳಾವಾಗಿ ನನ್ನಲ್ಲಿ ಬೇರೂರಿದ್ದು ನಾನು ಮೈಸೂರಿನಲ್ಲಿ ನನ್ನ ವೈದ್ಯಭ್ಯಾಸ ಮಾಡೋ ಸಮಯದಲ್ಲಿ. ಈ ಬ್ಲಾಗ್ನಲ್ಲಿ ಕನ್ನಡದಲ್ಲಿ ಎನಾದ್ರೂ ಬರೆಯಬೇಕು ಅನ್ನಿಸಿದಾಗ ನನ್ನ ಮನಸಿಗೆ ಮೊದಲು ತೋಚಿದ ವಿಷಯ ಅಂದ್ರೆ ನನ್ನ ಕಾಲೇಜಿನ ದಿನಗಳು, ನೆನಪುಗಳೇನೊ ಕಾಲೇಜಿನ ದಿನಗಳದ್ದಾದರೂ ಖಂಡಿತವಗಿಯೂ ಓದಿನ ಬಗ್ಗೆ ಅಲ್ಲ. ಬದಲಾಗಿ ಕ್ಲಾಸ್ ರೂಮಿನಿಂದ ಹೊರಗೆ ಸ್ನೇಹಿತರೊಂದಿಗೆ ಕಳೆದ ಮರೆಯಲಾಗದ ಕ್ಷಣಗಳು.
ಯಾವುದೇ ಕಾಲೇಜಾಗಲಿ ಅಥವಾ ಎಲ್ಲೇ ಆಗಲಿ ನಮ್ಮ ತರಂಗಗಳಿಗೆ ಹೊಂದಿಕೊಳ್ಳೋ ಅಂತ ಸ್ನೇಹಿತರ ಗುಂಪುಗಳನ್ನ ನಾವೆಲ್ಲರೂ ಮಾಡಿಕೊಂಡಿರುತ್ತೀವಿ. ಅಂಥ ನನ್ನ ಬಳಗ ಕೂಡ ಇತ್ತು ಹಾಗೂ ಈಗಲೂ ಇದೇ ಕೂಡ. ಆ ನಮ್ಮ ಬಳಗಕ್ಕೆ ನಾವುಗಳು ಕೊತ್ತುಕೊಂಡ ಹೆಸರೇ- "೨೦೦೧ರ ತುಂಟ"ರು. ಹೆಸರು ಕೇಳಿ ಆಶ್ಚರ್ಯ ಆಯ್ತೋ ಇಲ್ಲಾ ನಗು ಬಂತೋ??? ಆ ಹೆಸರು ನಮ್ಮ ಗುಂಪಿಗೆ ಬರೋದರ ಹಿಂದೆ ಒಂದು ಸಣ್ಣ ಹಾಗೂ ಅಷ್ಟೇ ಸ್ವಾರಸ್ಯಕರ ಹಿನ್ನಲೆ ಕೂಡ ಇದೆ. ಆ ಹಿನ್ನಲೇನ ಹೆಳೋ ಮೊದಲು ನಮ್ಮ ತಂಡವನ್ನ ಪರಿಚಯ ಮಾಡಿಕೊಡುತ್ತೀನಿ. ಈ ನಮ್ಮ ತಂಡದಲ್ಲಿ ಒಟ್ಟು ಹತ್ತು ಜನ ಇದ್ದೀವಿ. ನನ್ನನ್ನ ಹೊರತುಪಡಿಸಿ ಉಳಿದವರ ಬಗ್ಗೆ ನನ್ನ ಅನಿಸಿಕೆ ಹಾಗೂ ನಾ ಕಂಡಂತೆ ಅವರುಗಳಾ ಬಗ್ಗೆ ಹೇಳಿಬಿಡುತ್ತೀನಿ. ಈ ಬ್ಲಾಗ್ ಮೂಲಕ ಅವರುಗಳಿಗೆ ಕೆಲವೊಮ್ಮೆ ಮುಖತಃ ಹೇಳಲಾಗದ ಎಷ್ಟೋ ಸಂಗತಿಗಳನ್ನ ಹೇಳಬಹುದು ಕೂಡ.
  1. ಕೆ.ಪಿ. ಪ್ರದೀಪ್- ಇವನ ಹೆಸರನ್ನ ಕರೆಯೋ ಅಭ್ಯಾಸ ಇರೋರು ಬಹಳ ಕಡಿಮೆ. ಎಲ್ಲರಿಗೂ ಈತ "ಕೆ.ಪಿ" ಎಂದೆ ಚಿರಪರಿಚಿತ. ಮಂಡ್ಯ ಹುಡುಗ ( ಅದೇನೋ ಗೊತ್ತಿಲ್ಲ, ಈ ಮಂಡ್ಯದ ಹುಡುಗರನ್ನ ನೋಡಿದರೆನೆ ಗುರುತು ಹಿಡಿಯಬಹುದು. ಅವರ ಹಾವ-ಭಾವ, ಚಲನ-ವಲನ ಎಲ್ಲಾ ಮಂಡ್ಯದ ಅಚ್ಚನ್ನ ಕಾಣಬಹುದು). ಈತನನ್ನ ಮೊದಲು ನೋಡಿದಾಗ ಅನ್ನಿಸೋದು; ಈತ ಯಾರ ಜೊತೆನಲ್ಲು ಬೆರೆಯೋದಿಲ್ಲವೇನೊ, ತುಂಬ ರಿಸರ್ವ್ಡ್ ತರ. ಆದರೆ ಬೆರೆತು ನೋಡಿದಾಗ ಅನ್ನಿಸೋದು ಅದಕ್ಕೆ ತದ್ವಿರುದ್ದ. ನೋಡಲು ತುಂಬ ರಫ್ ಅಂಡ್ ಟಫ್ ಅನ್ನಿಸಿದರೂ ಮಾತಿನಲ್ಲಿ ಮಿತಭಾಷಿ.ನಮ್ಮ ತಂಡದ ಎಲ್ಲರಲ್ಲೂ ಇರೋ ಒಂದು ಭಾವನೆ ಅಂದರೆ ನನಗೂ ಮತ್ತೂ ಕೆ.ಪಿ ಗೂ ಅಷ್ಟಾಗಿ ಹೊಂದೋದಿಲ್ಲ ಅಂತ. ಬಹುಶಃ ನಾನೂ ಕೂಡ ಅದಕ್ಕೆ ಪುಷ್ಟಿ ಕೊಡೋ ಹಾಗೆ ವರ್ತಿಸುತಿದ್ದೆ ಕೂಡ. ಆದ್ರೆ ಇದುವರೆವಿಗು ನನ್ನ ಹಾಗು ಅವನ ಮಧ್ಯ ಯಾವುದೆ ಜಗಳ ಆಗಲಿ, ಒಬ್ಬರನ್ನ ಒಬ್ಬರು ಜರಿದುಕೊಂಡು ಬೈದಿರುವುದಾಗಲಿ ಆಗಿಲ್ಲ. ಆದ್ರೂ ಎಲ್ಲರಿಂದ ಆ ಭಾವನೇನ ತೆಗಿದು ಹಾಕಿಸೋಕಾಗಿಲ್ಲ. ಈ ಬ್ಲಾಗ್ ಮೂಲಕ ಕೆ.ಪಿ ಗೆ ಹೇಳ್ಕೊಳ್ಳೋದಾದ್ರೆ ಅವನ ಬಗ್ಗೆ ಖಂಡಿತ ಒಂದು ರೀತಿ ಜಲಸಿ ಇತ್ತು. ಅದು ಯಾಕಂದ್ರೆ ಅವನಷ್ಟು ಚೆನ್ನಾಗಿ ಕಮ್ಮ್ಯುನಿಕೇಶನ್ ಸ್ಕಿಲ್ಲ್ ನನ್ನಲ್ಲಿ ಇರಲಿಲ್ಲ ಅಂತ. ಲೇ ಕೆ. ಪಿ ಆ ವಿಷಯವಾಗಿ ಖಂಡಿತ ನಿನ್ನನ್ನ ಮೆಚ್ಚಲೇಬೇಕು. ಆ ವಿಷಯದಲ್ಲಿ ನಾನು ನಿನ್ನ ರೀತಿ ಆಗೋಕೆ ಇಷ್ಟ ಪಡುತ್ತೀನಿ.
  2. ರಾಜಶೇಖರ್.ಜಿ.- ಅವನ ಅಪ್ಪ-ಅಮ್ಮ ಇಟ್ಟಿರೋ ಹೆಸರಿಗಿಂತ ಪ್ರಸಿದ್ದಿ ಪಡೆದ ಅವನ ಅಡ್ಡ ಹೆಸರೇ-"ಷಾ". ಆ ಹೆಸರು ಬರೋಕೆ ಕಾರಣಾನ ಇಲ್ಲಿ ಹೇಳೋಕ್ಕಾಗಲ್ಲ, ಕ್ಷಮಿಸಿ!! ಈತ ವಿಜಯನಗರದ ವೀರಪುತ್ರ. ಇವನೇನದ್ರೂ ವೈದ್ಯ ವೃತ್ತಿಗೆ ಬರಲ್ಲಿಲ್ಲ ಅಂದ್ರೆ ಪ್ರಾಯಶಃ ಹೊಸಪೇಟೇಲಿ ಟೂರಿಸ್ಟ್ ಗೈಡ ಆಗಿ ಕೆಲ್ಸ ಮಾಡ್ತಿದ್ದನೊ ಏನೋ. ಯಾರಾದ್ರೂ ಇವನ ಜನ್ಮಸ್ಥಳ ಹೊಸಪೇಟೆಯ ಬಗ್ಗೆ ಜರಿದರೆ ಮುಗೀತು, ವಿಜಯನಗರದ ಕಾಲದಲ್ಲಿ ತಪ್ಪಿತಸ್ಥರನ್ನದ್ರೂ ಕ್ಷಮಿಸುತ್ತಿದ್ರೋ ಏನೋ, ಇವನ ಬಾಯಲ್ಲಿ ಬರೋ ಕನ್ನಡದ ನಿಂದನಾ ಪದಗಳು ಅದಕ್ಕಿಂತ ಘನಘೋರ. ನಮ್ಮ ತಂಡ ಎನಾದ್ರೂ ಸ್ಟೇಜ್ ಪರ್ಫಾಮೆನ್ಸ್ ಕೊಡೋಕೆ ಹೆಸರು ನೊಂದಾಯಿಸಿ ಪರ್ಫಾಮ್ ಮಾಡಲಿಲ್ಲ ಅಂದ್ರೆ ಅದಕ್ಕೆ ಮೂಲ ಕಾರಣ ಈ ಮಹಾಶಯ. ಕೊನೇ ಕ್ಷಣದಲ್ಲಿ ಕೈ ಎತ್ತೋದ್ರಲ್ಲಿ ನಿಪುಣ. ಲೇ ಎಲ್.ಕೆ.ಬಿ ನಿನ್ನ ಮೇಲೆ ಇನ್ನ ಸಿಟ್ಟು ಹೋಗಿಲ್ಲ ಇವನ ಹಾಗೆ ಜೀವನವನ್ನ ಖುಷಿಯಿಂದ ಜೀವಿಸಿ, ಕಷ್ಟ ಇದ್ದ್ರೂ ತೋರಿಸ್ಕೊಳ್ಳದೆ ಮುನ್ನುಗ್ಗೊ ಸ್ವಭಾವ ನನಗಿಷ್ಟ.
  3. ತೇಜಸ್ವಿ ಕುಮಾರ್.ಎ.ಬಿ.- ನಮ್ಮ ತಂಡದ ಮಾನಸಿಕ ರೋಗ ವೈದ್ಯ. ಅಂದ್ರೆ ಯಾರೇ ಆಗಲಿ ಏನದ್ರು ಕನ್ಫ್ಯೂಷನಲ್ಲಿ ಇದ್ದರೆ, ಅಂತವರಿಗೆ ಅವರು ಮಾಡೋಕೆ ಹೊರಟಿರ‍ೋ ಕೆಲಸದ ಬಗ್ಗೆ ಒಲವು ಮೂಡಿಸಿ ಅವರ ಮೂಡನ್ನು ಸರಿ ಮಾಡೋದರಲ್ಲಿ ಎತ್ತಿದ ಕೈ. ಸಾಕ್ರೇಟಿಸ್ ಕೂಡ ಇಷ್ಟು ಫಿಲಾಸಫಿ ಹೇಳ್ತಿದ್ದನೋ ಏನೋ ನಾನಂತೂ ಕಂಡಿಲ್ಲ, ಆದರೆ ನಮ್ಮ ಶಿವಮೊಗ್ಗೆಯ ಈ ಹುಡುಗ ಅವನನ್ನ ಮೀರಿಸೋದು ಖಂಡಿತ. ಅದಕ್ಕೆ ಇವನನ್ನ ಅಭಿನವ "ಸಾಕ್ರೇಟಿಸ್"ಅಂತ ನಾಮಂಕಿತ ಮಾಡಿದ್ದೀವಿ. ನೋಡೋಕೆ ಸೋಂಬೇರಿ ಅಂತ ಅನ್ನಿಸಿದರೂ ಕೊಡ ನಮ್ಮ ತಂಡದ ಅತಿ ಹೆಚ್ಚು ಕೆಲಸಗಾರ. ಯಾರಿಗೇ ಆದ್ರೂ ಸಹಾಯ ಮಡೋಕೆ ಹಿಂದೂಮುಂದೂ ನೋಡದಂತ ಹುಡುಗ. ಅವನ ಆ ಶಾಂತ ಸ್ವಭಾವ ನನಗೂ ಸ್ವಲ್ಪ ಎರವಲು ಪಡೆಯೋ ಆಸೆ.
  4. ಚಿದಾನಂದ.ವಿ.- ನಾವೆಲ್ಲ ಸಿನಿಮಾಗಳಲ್ಲಿ ಹೀರೋಗಳಿಗೆ ಬಿರುದುಗಳು ಇರೋದು ನೋಡಿರ್ತೀವಿ. ಇಲ್ಲಿದ್ದಾನೆ ನಮ್ಮ ತಂಡದ "ರೈಸಿಂಗ್ ಸ್ಟಾರ್". ಆ ಬಿರುದು ನೀವಂದುಕೊಳ್ಳೋ ತರಹ ಅಲ್ಲ. ಯಾರಾದ್ರು ಯದ್ವಾ ತದ್ವಾ ಮಾತಾಡಿದ್ರೆ ಸಾಕು, ಈ ನಮ್ಮ ಹುಡುಗನಿಗೆ ಕೋಪ ನೆತ್ತಿಗೆ ಎರಿಬಿಡುತ್ತೆ. ಸೋ, ಬಹಳ ಬೇಗ ರೈಸ್ ಆಗೋದ್ರಿಂದ ಇವನು ರೈಸಿಂಗ್ ಸ್ಟಾರ್. ಈತ ಹಾಸನದ ಚೆಲುವ ಕೊಡ. ತುಂಬ ಮೃದು ಸ್ವಭಾವ, ಓದಿನಲ್ಲಿ ಅಷ್ಟೇ ನಿಷ್ಟೆ ಇರುವವ. ಈತನ ಜೀವನದಲ್ಲಿನ ಘಟನೆಗಳು ಏನಾದ್ರೂ ಹೀರೋ ಸುದೀಪಗೆ ಸಿಕ್ಕಿದ್ರೆ ಇವನ ಕಥೆಯನ್ನ ಆಟೋಗ್ರಾಫ್ ಸಿನಿಮಾ ಮಾಡಬಹುದಿತ್ತು. ಲೇ ಚಿದು, ಏನೇ ಆದರೂ ನಾವೆಲ್ಲ ನಿನ್ನ ಜೊತೆ ಇದ್ದೀವಿ, ಧೈರ್ಯವಾಗಿರು.
  5. ವಿನಯ್.ಎಸ್,ಆರ್.- ಕರ್ನಾಟಕ ರಾಜ್ಯಕ್ಕೆ ಮುಂದೊಂದು ದಿನ ಈತ ಮುಖ್ಯಮಂತ್ರಿ ಆದ್ರೂ ಆಶ್ಚರ್ಯ ಇಲ್ಲ. ಏನಿಲ್ಲ ಅಂದರೂ ಆಹಾರ ಖಾತೆ ಸಚಿವ ಅಂತೂ ಆಗೇ ಆಗ್ತಾನೆ. ಯಡಿಯೂರಪ್ಪನವರ ತವರು ಜಿಲ್ಲೆ ಶಿವಮೊಗ್ಗದ ಭವಿಷ್ಯದ ರಾಜಕಾರಿಣಿ. ನಮ್ಮ ಹಾಸ್ಟೆಲ್ಲಿನ ಅನ್ನದಾತ. ಈತ ಹಾಸ್ಟೆಲ್ ಮೆಸ್ಸ್ ಗೆ ಎಷ್ಟು ಬಾರಿ ಪ್ರಿಫೆಕ್ಟ್ ಆಗಿದ್ದನೆ ಅಂತ ಅವ್ನಿಗೇನೇ ಲೆಕ್ಕ ಇಲ್ಲ. ಹತ್ತು ರೂಪಯಿಯಲ್ಲಿ ಒಂದು ಫಫ್ಸ್, ಒಂದು ಕೇಕ್ ಹಾಗೂ ಒಂದು ಟೀ ತರಿಸಿ, ಅದರಲ್ಲಿ ಐದು ರೂಪಾಯಿಯನ್ನ ಉಳಿಸುವ ಕಲೆ ಈತನಿಗೆ ಕರಗತ. ಜೀವನವನ್ನ ಹೇಗೆ ರೂಪಿಸಿಕೊಳ್ಳಬೇಕು ಅನ್ನೊದನ್ನ ಇವನನ್ನ ನೋಡಿ ಕಲಿಯಬೇಕು. ಅಂದಹಾಗೆ, ಇವನ ಅಡ್ದಹೆಸರು "ಕಾಚಪ್ಪ". ಅದು ಯಾಕೆ ಬಂತು ಅಂತಾ ಮುಂದೆ ಹೇಳ್ತೇನೆ.
  6. ಮಹೇಶ್ ಮೂರ್ತಿ.- ಹೆಸರೇ ಹೇಳೊ ಹಾಗೆ ಮೂರ್ತಿ ಚಿಕ್ಕದಾದರೂ , ಇವನ ಕಾರ್ಯಗಳಿಂದ ಕೀರ್ತಿವಂತ. ಅಂದಹಾಗೆ ಕಾರ್ಯಗಳು ಅಂದ್ರೆ ಎಲ್ಲಾ ಅಡ್ಡಾದಿಡ್ಡಿ ಕೆಲಸಗಳು. ಇವ ಯಾವುದೇ ಕೆಲಸ ಮಾಡಲು ಹೋದ್ರೂ ಡಿಫ್ರೇಂಟಾಗಿ ಮಾಡೋ ಚಟ. ಆದ್ರೆ ದುರಾದೄಷ್ಟ ಅವೆಲ್ಲ ಹೊಗೆಯಾಗಿ ಹೋಗ್ತಾವೆ. ಅದಕ್ಕೆ "ಹೊಗೆ ಮೂರ್ತಿ" ಅಂತಾನೆ ಫೇಮಸ್. ಈತನ ಜನ್ಮಭೂಮಿ- ಶಿವಮೊಗ್ಗ ಜಿಲ್ಲೆಯ, ಅಕ್ಕಮಹಾದೆವಿಯ ಊರಾದ ಉಡುತಡಿಯ ಪಕ್ಕದ ತಡಗಣಿ. ಪೂರಾ ಹೀಗೆ ಹೇಳದಿದ್ದರೆ ಇವನ ಕೊರೆತ ನಿಮಗೆ ಕಟ್ಟಿಟ್ಟ ಬುತ್ತಿ. ಹೊಗೆಯ ಕಥೆಗಳನ್ನ ಖಂಡಿತ ಮುಂದೆ ಹೇಳುತ್ತೇನೆ.
  7. ಪ್ರವೀಣ್ ಕುಮಾರ್. ಎನ್- ನಮ್ಮ ತಂಡದ ಪುಟ್ಟಣ್ಣ "ಕಣಗಾಲ್". ನಿಜವಾಗಿಯೂ ಈತ ಕಣಗಾಲಿನ ಊರಿನವನೆ, ಆದರೆ ಸ್ವಲ್ಪ ಪಕ್ಕದೂರು ಅಷ್ಟೆ!! ನಮ್ಮ ತಂಡದ ಕ್ರಿಯಾತ್ಮಕ ತಲೆ. ನಾವು ಫರ್ಫಾಮ್ ಮಾಡಿದ ಭಕ್ತ ಪ್ರಹ್ಲಾದ ಮೂವಿ ಸ್ಫೂಫ್ ನ ಯಶಸ್ಸಿನ ಹಿಂದಿನ ಧ್ವನಿ. ನಿಜವಾಗಿಯು ಕಂಚಿನ ಕಂಟದ ಹುಡುಗ. ಆದರೆ ಈತನ ಹಿಂದಿ ಹಾಡುಗಳನ್ನ ಕೇಳಿದರೆ,ರ್ ರ್ ರ್ ರ್...ಬೇಡ ಬಿಡಿ. ಸ್ವಲ್ಪ ಮಟ್ಟಿಗೆ ಇರಿಟ್ಟೇಟ್ ಮಾಡಿದ್ರೂ ಕೂಡ ಎಲ್ಲರೊಂದಿಗೆ ಹೊಂದಿಕೊಳ್ಳೊ ಸ್ವಭಾವ. ಆದ್ರೆ ಅಪ್ಪಟ ಸೋಂಭೇರಿ. ಕಥೆ ಹೇಳೋದರಲ್ಲಿ ಎತ್ತಿದ ಕೈ. ಒಮ್ಮೆ ಆತನೇ ಹೇಳಿಕೊಂಡ ಆತನ ಲವ್ ರಾತ್ರಿಯ ಕಥೆಯನ್ನ ಮುಂದೆ ಹೇಳುತ್ತೇನೆ.
  8. ಗಿರೀಶ್.ಎಂ.ಟಿ- ನನ್ನ ರೂಂ ಮೇಟ್ ಕೂಡ. ಮಿಂಚಿನಂತ ವಾಲಿಬಾಲ್ ಆಟಗಾರ, ಅಥ್ಲೀಟ್, ರಸಿಕ, ಇನ್ನೊ ಏನೇನೋ..!!! ವಾಲಿಬಾಲ್ ಆಟದಲ್ಲಿ ಈತ ಹಾಕುವ ಗ್ಯಾಪ್ ಗಳಿಗೆ ಫೇಮಸ್. ಅದಕ್ಕೇ ಈತ "ಗ್ಯಾಪ್ ಗಿರಿಯಾ". ಮಳವಳ್ಳಿಯ ಮಳ್ಳ, ನಿದ್ದೆ ಬರದ ಎಷ್ಟೋ ರಾತ್ರಿಗಳಲ್ಲಿ ನನಗೆ ಜೊತೆ ನೀಡಿದ ಹುಡುಗ( ಮಾತಿಗೆ ಮಾತ್ರ, ಏನೇನೋ ಯೊಚಿಸಬೆಡಿ). ಕ್ರಿಕೆಟನಲ್ಲಿ ಇತ್ತೀಚಿಗೆ ಬೆಳಕಿಗೆ ಬಂದಿರೊ ಸ್ಲೋ ಬಾಲನ್ನ್ ಈತ ಹುಟ್ಟಿದಾಗಿನಿಂದ ಬೌಲ್ ಮಾಡಬಲ್ಲ. ಶೊಯೆಬ್ ಅಖ್ತರ್ ಸ್ಪೀಡನಲ್ಲಿ ಓಡಿ ಬಂದು ಹರ್ಭಜನನ ಸ್ಪೀಡನಲ್ಲಿ ಬೌಲ್ ಮಾಡೋ ಚಾತುರ್ಯ ಈತನದು.
  9. ಪ್ರದೀಪ್.ಜಿ- ನಮ್ಮ ಸ್ಕಿಟಗಳ ಹೀರೋ. ನಮ್ಮ ಸ್ಕಿಟ್-ಗಳನ್ನ ಗೆಲ್ಲಿಸೋದರಲ್ಲಿ ಇವನ ಪಾತ್ರ ಕೂಡ ಅಪರಿಮಿತ. ಆದರೆ ನಮ್ಮ ತಂಡದಿಂದ ಅರ್ಧದಲ್ಲೆ ಬೇರ್ಪಡೆಯಾದವ. ಯಾಕೆ? ಹೇಗೆ? ಇದಕ್ಕೆ ಉತ್ತರ ಬಹುಶಃ ಅವನ ಬಳಿಯೂ ಇಲ್ಲ, ನಮ್ಮ ಬಳಿಯೂ ಇಲ್ಲ.ನನ್ನ ಕಡೂರು ಊರಿನವನಾದ ಈತನ ಮೇಲೆ ಅದೇನೋ ಒಂದು ರೀತಿ ಅಭಿಮಾನ. ನಮ್ಮ ತಂಡದಿಂದ ದೂರಾದರೂ ನಮ್ಮವನೇ ಆದ "ಕಿಟ್ಟಿ".
ಇವರೇ ನಮ್ಮ ೨೦೦೧ ತುಂಟರ ಜೊತೆಗಾರರು. ನಮ್ಮ ತಂಡಕ್ಕೆ ಈ ಹೆಸರು ಬರಲು ಕಾರಣವೇನು ಹಾಗೂ ನಮ್ಮ ನಡುವೆ ನಡೆದ ಸ್ವಾರಸ್ಯಕರ ಘಟನೆಗಳನ್ನ ನನ್ನ ಮುಂದಿನ ಬ್ಲಾಗ್-ಗಳ ತರುವಾಯ ಬಿಚ್ಚಿಡುತ್ತಾ ಹೋಗುತ್ತೇನೆ. ನಮ್ಮಗಳ ನೆನಪುಗಳಲ್ಲಿ ನಿಮ್ಮನೆಲ್ಲರನ್ನೂ ಪಯಣ ಮಾಡಿಸೋ ಭರವಸೆಯೊಂದಿಗೆ ಮತ್ತೆ ಬರೆಯುತ್ತೇನೆ. ಅಲ್ಲಿಯವರೆಗು ನೆನಪಿಡಿ- ನಾವು "೨೦೦೧ರ ತುಂಟ"ರು.